ETV Bharat / bharat

ಭುವನೇಶ್ವರ ಕೊಳೆಗೇರಿಗೆ ಭೇಟಿ ನೀಡಿದ ಬಿಲ್​ ಗೇಟ್ಸ್​: ನಿವಾಸಿಗಳ ಜೊತೆ ಸಂವಾದ

author img

By PTI

Published : Feb 28, 2024, 9:13 PM IST

Updated : Feb 28, 2024, 9:27 PM IST

ಭುವನೇಶ್ವರದ ಸ್ಲಮ್​ಗೆ ಭೇಟಿ ನೀಡಿದ ಬಿಲ್ ಗೇಟ್ಸ್​, ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರ ಜೊತೆಗೆ ಸಂವಾದ ನಡೆಸಿದರು.

Bill Gates Visited Bhubaneswar Slums: Interacted with Residents
ಭುವನೇಶ್ವರ ಕೊಳೆಗೇರಿಗೆ ಭೇಟಿ ನೀಡಿದ ಬಿಲ್​ ಗೇಟ್ಸ್​: ನಿವಾಸಿಗಳ ಜೊತೆ ಸಂವಾದ

ಭುವನೇಶ್ವರ(ಒಡಿಶಾ): ಮೈಕ್ರೋಸಾಫ್ಟ್​ ಸಹ ಸಂಸ್ಥಾಪಕ ಬಿಲ್​ಗೇಟ್ಸ್ ಅವರು​ ಇಂದು ಭುವನೇಶ್ವರದ ಕೊಳೆಗೇರಿ ಪ್ರದೇಶಕ್ಕೆ ಭೇಟಿ ನೀಡಿದ್ದು, ಅಲ್ಲಿ ವಾಸಿಸುವ ಜನರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಮಾ ಮಂಗಳ ಬಸ್ತಿಯಲ್ಲಿರುವ ಬಿಜು ಆದರ್ಶ ಕಾಲೊನಿಗೆ ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ತೆರಳಿದ ಅವರು, ಜನರ ಯೋಗಕ್ಷೇಮ ವಿಚಾರಿಸಿದರು. ಅಲ್ಲಿನ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರೊಂದಿಗೆ ಸಂವಾದ ನಡೆಸಿದರು. ಮೂಲಸೌಕರ್ಯಗಳ ಕುರಿತು ಹಾಗೂ ಸರ್ಕಾರದ 'ಜಗ ಮಿಷನ್' ಬಗ್ಗೆಯೂ ಮಾಹಿತಿ ಪಡೆದರು.

ರಾಜ್ಯ ಅಭಿವೃದ್ಧಿ ಆಯುಕ್ತೆ ಅನು ಗಾರ್ಗ್​ ಅವರು ಸ್ಲಂ ನಿವಾಸಿಗಳಿಗೆ ಒದಗಿಸಿರುವ ಭೂಮಿಯ ಹಕ್ಕು, ನಲ್ಲಿ ನೀರಿನ ವ್ಯವಸ್ಥೆ, ನೈರ್ಮಲ್ಯ ಸೌಲಭ್ಯ ಹಾಗೂ ವಿದ್ಯುತ್​ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳ ಬಗ್ಗೆ ವಿವರ ನೀಡಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅನು ಗಾರ್ಗ್​, "ಕೊಳೆಗೇರಿ ನಿವಾಸಿಗಳಿಗೆ ಭೂಮಿಯ ಹಕ್ಕು, ನಲ್ಲಿ ನೀರಿನ ಸಂಪರ್ಕ, ಶೌಚಾಲಯ, ವಿದ್ಯುತ್​ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ ಬಿಲ್​ ಗೇಟ್ಸ್​ ಅವರಿಗೆ ವಿವರಿಸಿದೆವು. ಕೊಳಚೆ ಪ್ರದೇಶವನ್ನು ಮಾದರಿ ಕಾಲೊನಿಯಾಗಿ ಪರಿವರ್ತಿಸಿರುವ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು" ಎಂದರು.

ರಾಜ್ಯ ನಗರಾಭಿವೃದ್ಧಿ ಕಾರ್ಯದರ್ಶಿ ಜಿ.ಮತಿ ವತನನ್​​ ಮಾತನಾಡುತ್ತಾ, "ಬಿಲ್ ಗೇಟ್ಸ್​ ಅವರು ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಫಲಾನಭವಿಗಳ ಜೊತೆಗೆ ಮಾತನಾಡಿದರು. ಸರ್ಕಾರದ ಯೋಜನೆಗಳಿಂದ ಅವರ ಜೀವನಶೈಲಿಯಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ವಿಚಾರಿಸಿದರು" ಎಂದು ತಿಳಿಸಿದರು.

2017ರಿಂದ ಒಡಿಶಾ ಸರ್ಕಾರದ ಕೃಷಿ ಮತ್ತು ರೈತ ಸಬಲೀಕರಣ ಇಲಾಖೆ ಮತ್ತು ಮೀನುಗಾರಿಕೆ ಮತ್ತು ಪ್ರಾಣಿ ಸಂಪನ್ಮೂಲ ಇಲಾಖೆಯು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ ಜೊತೆ ಸೇರಿಕೊಂಡು ಡೇಟಾ-ಚಾಲಿತ ಡಿಸಿಶನ್​ ಮೇಕಿಂಗ್​ ನಾವೀನ್ಯತೆಗಾಗಿ ಕೆಲಸ ಮಾಡುತ್ತಿದೆ.

ಇದಾದ ಬಳಿಕ ಬಿಲ್​ ಗೇಟ್ಸ್​ ಒಡಿಶಾ ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು. ಈ ವೇಳೆ ತಂತ್ರಜ್ಞಾನ ಚಾಲಿತ ರೈತ ಸಬಲೀಕರಣ ಉಪಕ್ರಮಗಳ ಕುರಿತು ಅವರು ಚರ್ಚಿಸಿದರು. ರಾಜ್ಯ ಸರ್ಕಾರದ ವಿವಿಧ ಉಪಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ನಡೆಸಿದರು.

ಹೈದರಾಬಾದ್‌ನಲ್ಲಿರುವ ಮೈಕ್ರೋಸಾಫ್ಟ್‌ನ ಇಂಡಿಯಾ ಡೆವಲಪ್‌ಮೆಂಟ್ ಸೆಂಟರ್‌ಗೆ ಭೇಟಿ: ಹೈದರಾಬಾದ್​ನಲ್ಲಿರುವ ಮೈಕ್ರೋಸಾಫ್ಟ್​ನ ಇಂಡಿಯಾ ಡೆವಲಪ್​ಮೆಂಟ್​ ಸೆಂಟರ್‌ಗೆ​ (ಐಡಿಸಿ) ಬಿಲ್​ ಗೇಟ್ಸ್​ ಇಂದು ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಯುವ ಇಂಜಿನಿಯರ್​ಗಳನ್ನು ಉದ್ದೇಶಿಸಿ ಅವರು​ ಮಾತನಾಡಿದರು.

"AI ಚಾಲಿತ ಭಾರತಕ್ಕಿರುವ ಅವಕಾಶದ ಬಗ್ಗೆ ಬಿಲ್​ ಗೇಟ್ಸ್​ ಆಶಾವಾದ ಹಂಚಿಕೊಂಡಿದ್ದಾರೆ" ಎಂದು ಮೈಕ್ರೋಸಾಫ್ಟ್​ ಐಡಿಸಿ ಹಾಗೂ ಸಿವಿಪಿನ ವ್ಯವಸ್ಥಾಪಕ ನಿರ್ದೇಶಕ ರಾಜೀವ್​ ತಿಳಿಸಿದರು.

ಇದನ್ನೂ ಓದಿ: ಹೈದರಾಬಾದ್​ನ ಮೈಕ್ರೋಸಾಫ್ಟ್ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ ಬಿಲ್ ಗೇಟ್ಸ್​

ಭುವನೇಶ್ವರ(ಒಡಿಶಾ): ಮೈಕ್ರೋಸಾಫ್ಟ್​ ಸಹ ಸಂಸ್ಥಾಪಕ ಬಿಲ್​ಗೇಟ್ಸ್ ಅವರು​ ಇಂದು ಭುವನೇಶ್ವರದ ಕೊಳೆಗೇರಿ ಪ್ರದೇಶಕ್ಕೆ ಭೇಟಿ ನೀಡಿದ್ದು, ಅಲ್ಲಿ ವಾಸಿಸುವ ಜನರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಮಾ ಮಂಗಳ ಬಸ್ತಿಯಲ್ಲಿರುವ ಬಿಜು ಆದರ್ಶ ಕಾಲೊನಿಗೆ ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ತೆರಳಿದ ಅವರು, ಜನರ ಯೋಗಕ್ಷೇಮ ವಿಚಾರಿಸಿದರು. ಅಲ್ಲಿನ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರೊಂದಿಗೆ ಸಂವಾದ ನಡೆಸಿದರು. ಮೂಲಸೌಕರ್ಯಗಳ ಕುರಿತು ಹಾಗೂ ಸರ್ಕಾರದ 'ಜಗ ಮಿಷನ್' ಬಗ್ಗೆಯೂ ಮಾಹಿತಿ ಪಡೆದರು.

ರಾಜ್ಯ ಅಭಿವೃದ್ಧಿ ಆಯುಕ್ತೆ ಅನು ಗಾರ್ಗ್​ ಅವರು ಸ್ಲಂ ನಿವಾಸಿಗಳಿಗೆ ಒದಗಿಸಿರುವ ಭೂಮಿಯ ಹಕ್ಕು, ನಲ್ಲಿ ನೀರಿನ ವ್ಯವಸ್ಥೆ, ನೈರ್ಮಲ್ಯ ಸೌಲಭ್ಯ ಹಾಗೂ ವಿದ್ಯುತ್​ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳ ಬಗ್ಗೆ ವಿವರ ನೀಡಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅನು ಗಾರ್ಗ್​, "ಕೊಳೆಗೇರಿ ನಿವಾಸಿಗಳಿಗೆ ಭೂಮಿಯ ಹಕ್ಕು, ನಲ್ಲಿ ನೀರಿನ ಸಂಪರ್ಕ, ಶೌಚಾಲಯ, ವಿದ್ಯುತ್​ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ ಬಿಲ್​ ಗೇಟ್ಸ್​ ಅವರಿಗೆ ವಿವರಿಸಿದೆವು. ಕೊಳಚೆ ಪ್ರದೇಶವನ್ನು ಮಾದರಿ ಕಾಲೊನಿಯಾಗಿ ಪರಿವರ್ತಿಸಿರುವ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು" ಎಂದರು.

ರಾಜ್ಯ ನಗರಾಭಿವೃದ್ಧಿ ಕಾರ್ಯದರ್ಶಿ ಜಿ.ಮತಿ ವತನನ್​​ ಮಾತನಾಡುತ್ತಾ, "ಬಿಲ್ ಗೇಟ್ಸ್​ ಅವರು ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಫಲಾನಭವಿಗಳ ಜೊತೆಗೆ ಮಾತನಾಡಿದರು. ಸರ್ಕಾರದ ಯೋಜನೆಗಳಿಂದ ಅವರ ಜೀವನಶೈಲಿಯಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ವಿಚಾರಿಸಿದರು" ಎಂದು ತಿಳಿಸಿದರು.

2017ರಿಂದ ಒಡಿಶಾ ಸರ್ಕಾರದ ಕೃಷಿ ಮತ್ತು ರೈತ ಸಬಲೀಕರಣ ಇಲಾಖೆ ಮತ್ತು ಮೀನುಗಾರಿಕೆ ಮತ್ತು ಪ್ರಾಣಿ ಸಂಪನ್ಮೂಲ ಇಲಾಖೆಯು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ ಜೊತೆ ಸೇರಿಕೊಂಡು ಡೇಟಾ-ಚಾಲಿತ ಡಿಸಿಶನ್​ ಮೇಕಿಂಗ್​ ನಾವೀನ್ಯತೆಗಾಗಿ ಕೆಲಸ ಮಾಡುತ್ತಿದೆ.

ಇದಾದ ಬಳಿಕ ಬಿಲ್​ ಗೇಟ್ಸ್​ ಒಡಿಶಾ ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು. ಈ ವೇಳೆ ತಂತ್ರಜ್ಞಾನ ಚಾಲಿತ ರೈತ ಸಬಲೀಕರಣ ಉಪಕ್ರಮಗಳ ಕುರಿತು ಅವರು ಚರ್ಚಿಸಿದರು. ರಾಜ್ಯ ಸರ್ಕಾರದ ವಿವಿಧ ಉಪಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ನಡೆಸಿದರು.

ಹೈದರಾಬಾದ್‌ನಲ್ಲಿರುವ ಮೈಕ್ರೋಸಾಫ್ಟ್‌ನ ಇಂಡಿಯಾ ಡೆವಲಪ್‌ಮೆಂಟ್ ಸೆಂಟರ್‌ಗೆ ಭೇಟಿ: ಹೈದರಾಬಾದ್​ನಲ್ಲಿರುವ ಮೈಕ್ರೋಸಾಫ್ಟ್​ನ ಇಂಡಿಯಾ ಡೆವಲಪ್​ಮೆಂಟ್​ ಸೆಂಟರ್‌ಗೆ​ (ಐಡಿಸಿ) ಬಿಲ್​ ಗೇಟ್ಸ್​ ಇಂದು ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಯುವ ಇಂಜಿನಿಯರ್​ಗಳನ್ನು ಉದ್ದೇಶಿಸಿ ಅವರು​ ಮಾತನಾಡಿದರು.

"AI ಚಾಲಿತ ಭಾರತಕ್ಕಿರುವ ಅವಕಾಶದ ಬಗ್ಗೆ ಬಿಲ್​ ಗೇಟ್ಸ್​ ಆಶಾವಾದ ಹಂಚಿಕೊಂಡಿದ್ದಾರೆ" ಎಂದು ಮೈಕ್ರೋಸಾಫ್ಟ್​ ಐಡಿಸಿ ಹಾಗೂ ಸಿವಿಪಿನ ವ್ಯವಸ್ಥಾಪಕ ನಿರ್ದೇಶಕ ರಾಜೀವ್​ ತಿಳಿಸಿದರು.

ಇದನ್ನೂ ಓದಿ: ಹೈದರಾಬಾದ್​ನ ಮೈಕ್ರೋಸಾಫ್ಟ್ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ ಬಿಲ್ ಗೇಟ್ಸ್​

Last Updated : Feb 28, 2024, 9:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.