ETV Bharat / bharat

ಸಿಲಿಂಡರ್​ ಇಟ್ಟು ರೈಲು ಹಳಿ ತಪ್ಪಿಸುವ ಮತ್ತೊಂದು ಯತ್ನ: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ - Another Attempt To Derail Train

author img

By ETV Bharat Karnataka Team

Published : 2 hours ago

Updated : 1 hours ago

ಹಳಿಗಳ ಮೇಲೆ ಗ್ಯಾಸ್​ ಸಿಲಿಂಡರ್ ಇಟ್ಟು ರೈಲು ಹಳಿ ತಪ್ಪಿಸುವ ಮತ್ತೊಂದು ಯತ್ನವನ್ನು ವಿಫಲಗೊಳಿಸಲಾಗಿದೆ.

ಹಳಿಯ ಮೇಲೆ ಕಂಡು ಬಂದ ಸಿಲಿಂಡರ್
ರೈಲು ಹಳಿಯ ಮೇಲೆ ಕಂಡು ಬಂದ ಗ್ಯಾಸ್ ಸಿಲಿಂಡರ್ (ANI)

ಕಾನ್ಪುರ(ಉತ್ತರ ಪ್ರದೇಶ): ಹಳಿಗಳ ಮೇಲೆ ಗ್ಯಾಸ್​ ಸಿಲಿಂಡರ್ ಇಟ್ಟು ರೈಲನ್ನು ಹಳಿ ತಪ್ಪಿಸುವ ಮತ್ತೊಂದು ಪ್ರಯತ್ನವನ್ನು ಉತ್ತರ ಪ್ರದೇಶದ ಕಾನ್ಪುರದಲ್ಲಿ ಭಾನುವಾರ ವಿಫಲಗೊಳಿಸಲಾಗಿದೆ. ದೆಹಲಿ-ಹೌರಾ ಮಾರ್ಗದ ಪ್ರೇಮ್ ಪುರ್ ನಿಲ್ದಾಣದ ಬಳಿ ರೈಲ್ವೆ ಹಳಿಗಳ ಮೇಲೆ ಖಾಲಿ ಗ್ಯಾಸ್ ಸಿಲಿಂಡರ್ ಇಡಲಾಗಿತ್ತು. ಆದರೆ ಗೂಡ್ಸ್​ ರೈಲಿನ ಲೋಕೋ ಪೈಲಟ್ ದೂರದಿಂದಲೇ ಸಿಲಿಂಡರ್ ಅನ್ನು ಗಮನಿಸಿ ತುರ್ತು ಬ್ರೇಕ್ ಹಾಕಿದ್ದು, ಸಂಭವಿಸಬಹುದಾಗಿದ್ದ ದೊಡ್ಡ ಅಪಘಾತವೊಂದನ್ನು ಕೂದಲೆಳೆಯ ಅಂತರದಲ್ಲಿ ತಪ್ಪಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ ಸರಕು ಸಾಗಣೆ ರೈಲು ಕಾನ್ಪುರದಿಂದ ಪ್ರಯಾಗ್ ರಾಜ್​ಗೆ ಲೂಪ್ ಲೈನ್ ಮೂಲಕ ಪ್ರಯಾಣಿಸುತ್ತಿತ್ತು. ಬೆಳಗ್ಗೆ 5:55 ರ ಸುಮಾರಿಗೆ ಹಳಿಗಳ ಮೇಲೆ 5 ಕೆಜಿ ತೂಕದ ಸಿಲಿಂಡರ್ ಬಿದ್ದಿರುವುದು ಪೈಲಟ್ ಗಮನಕ್ಕೆ ಬಂದಿದೆ. ಆಗ ಅವರು ತಕ್ಷಣವೇ ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದ್ದಾರೆ. ಈ ಮೂಲಕ ದೊಡ್ಡ ಅಪಘಾತವೊಂದನ್ನು ಅವರು ತಪ್ಪಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ರೈಲ್ವೆ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ರೈಲು ಸಿಬ್ಬಂದಿ ತಕ್ಷಣ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್​ಪಿಎಫ್) ಮತ್ತು ಇತರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಘಟನೆಯ ಬಗ್ಗೆ ರೈಲ್ವೆ ಅಧಿಕಾರಿಗಳು ಸಮಗ್ರ ತನಿಖೆ ಆರಂಭಿಸಿದ್ದಾರೆ. ಹಿರಿಯ ಅಧಿಕಾರಿಗಳು ಘಟನಾ ಸ್ಥಳ ಮತ್ತು ನಿಯಂತ್ರಣ ಕೊಠಡಿಯಲ್ಲಿ ಉಪಸ್ಥಿತರಿದ್ದು, ತನಿಖೆ ನಡೆಸುತ್ತಿದ್ದಾರೆ. ಕೆಲ ಹೊತ್ತಿನ ನಂತರ ಗೂಡ್ಸ್​ ರೈಲು ತನ್ನ ಪ್ರಯಾಣವನ್ನು ಪುನರಾರಂಭಿಸಿದೆ.

ರೈಲು ಅಪಘಾತವಾಗುವಂತೆ ಮಾಡುವ ಇಂಥ ಪಿತೂರಿ ಬಯಲಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು, ಕಾನ್ಪುರದ ಬಳಿ ಮಧ್ಯರಾತ್ರಿ ಸಾಬರಮತಿ ಎಕ್ಸ್​ಪ್ರೆಸ್​ ರೈಲು ಹಳಿ ತಪ್ಪಿದರೂ ದೊಡ್ಡ ಅಪಘಾತವಾಗುವುದರಿಂದ ಸ್ವಲ್ಪದರಲ್ಲೇ ತಪ್ಪಿತ್ತು. ವಾರಣಾಸಿಯಿಂದ ಅಹಮದಾಬಾದ್​ಗೆ ತೆರಳುತ್ತಿದ್ದ ರೈಲು ಗೋವಿಂದಪುರಿ ನಿಲ್ದಾಣದ ಬಳಿ ತಪ್ಪಿದ್ದರಿಂದ, 22 ಬೋಗಿಗಳು ಹಳಿಯಿಂದ ಹೊರ ಬಂದಿದ್ದವು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ.

ಇದೇ ರೀತಿಯ ಮತ್ತೊಂದು ಘಟನೆಯಲ್ಲಿ, ಸೆಪ್ಟೆಂಬರ್ 9ರಂದು ಕಾಳಿಂದಿ ಎಕ್ಸ್​ಪ್ರೆಸ್​ ಅನ್ನು ಹಳಿ ತಪ್ಪಿಸುವ ಪ್ರಯತ್ನವಾಗಿ ಕಾನ್ಪುರ-ಕಾಸ್ ಗಂಜ್ ಮಾರ್ಗದಲ್ಲಿ ಬರಾಜ್ ಪುರ ಮತ್ತು ಬಿಲ್ಹೌರ್ ನಿಲ್ದಾಣಗಳ ನಡುವಿನ ಮುಂಡೇರಿ ಗ್ರಾಮದ ಕ್ರಾಸಿಂಗ್ ಬಳಿ ರೈಲ್ವೆ ಹಳಿಯ ಮೇಲೆ ಗ್ಯಾಸ್ ಸಿಲಿಂಡರ್ ಅನ್ನು ಇರಿಸಲಾಗಿತ್ತು. ಗಂಟೆಗೆ 70-80 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ರೈಲು ಸಿಲಿಂಡರ್​ಗೆ ಡಿಕ್ಕಿ ಹೊಡೆದಿತ್ತು. ಆಗ ಚಾಲಕ ತಕ್ಷಣ ರೈಲನ್ನು ನಿಲ್ಲಿಸಿದ್ದರು.

ಇದನ್ನೂ ಓದಿ: ತಿರುಪತಿ ಲಡ್ಡು ಕಲಬೆರಕೆ ವಿವಾದ: 11 ದಿನಗಳ ಪ್ರಾಯಶ್ಚಿತ್ತ ಉಪವಾಸ ವ್ರತ ಕೈಗೊಂಡ ಪವನ್ ಕಲ್ಯಾಣ್ - Pawan Kalyan

ಕಾನ್ಪುರ(ಉತ್ತರ ಪ್ರದೇಶ): ಹಳಿಗಳ ಮೇಲೆ ಗ್ಯಾಸ್​ ಸಿಲಿಂಡರ್ ಇಟ್ಟು ರೈಲನ್ನು ಹಳಿ ತಪ್ಪಿಸುವ ಮತ್ತೊಂದು ಪ್ರಯತ್ನವನ್ನು ಉತ್ತರ ಪ್ರದೇಶದ ಕಾನ್ಪುರದಲ್ಲಿ ಭಾನುವಾರ ವಿಫಲಗೊಳಿಸಲಾಗಿದೆ. ದೆಹಲಿ-ಹೌರಾ ಮಾರ್ಗದ ಪ್ರೇಮ್ ಪುರ್ ನಿಲ್ದಾಣದ ಬಳಿ ರೈಲ್ವೆ ಹಳಿಗಳ ಮೇಲೆ ಖಾಲಿ ಗ್ಯಾಸ್ ಸಿಲಿಂಡರ್ ಇಡಲಾಗಿತ್ತು. ಆದರೆ ಗೂಡ್ಸ್​ ರೈಲಿನ ಲೋಕೋ ಪೈಲಟ್ ದೂರದಿಂದಲೇ ಸಿಲಿಂಡರ್ ಅನ್ನು ಗಮನಿಸಿ ತುರ್ತು ಬ್ರೇಕ್ ಹಾಕಿದ್ದು, ಸಂಭವಿಸಬಹುದಾಗಿದ್ದ ದೊಡ್ಡ ಅಪಘಾತವೊಂದನ್ನು ಕೂದಲೆಳೆಯ ಅಂತರದಲ್ಲಿ ತಪ್ಪಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ ಸರಕು ಸಾಗಣೆ ರೈಲು ಕಾನ್ಪುರದಿಂದ ಪ್ರಯಾಗ್ ರಾಜ್​ಗೆ ಲೂಪ್ ಲೈನ್ ಮೂಲಕ ಪ್ರಯಾಣಿಸುತ್ತಿತ್ತು. ಬೆಳಗ್ಗೆ 5:55 ರ ಸುಮಾರಿಗೆ ಹಳಿಗಳ ಮೇಲೆ 5 ಕೆಜಿ ತೂಕದ ಸಿಲಿಂಡರ್ ಬಿದ್ದಿರುವುದು ಪೈಲಟ್ ಗಮನಕ್ಕೆ ಬಂದಿದೆ. ಆಗ ಅವರು ತಕ್ಷಣವೇ ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದ್ದಾರೆ. ಈ ಮೂಲಕ ದೊಡ್ಡ ಅಪಘಾತವೊಂದನ್ನು ಅವರು ತಪ್ಪಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ರೈಲ್ವೆ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ರೈಲು ಸಿಬ್ಬಂದಿ ತಕ್ಷಣ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್​ಪಿಎಫ್) ಮತ್ತು ಇತರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಘಟನೆಯ ಬಗ್ಗೆ ರೈಲ್ವೆ ಅಧಿಕಾರಿಗಳು ಸಮಗ್ರ ತನಿಖೆ ಆರಂಭಿಸಿದ್ದಾರೆ. ಹಿರಿಯ ಅಧಿಕಾರಿಗಳು ಘಟನಾ ಸ್ಥಳ ಮತ್ತು ನಿಯಂತ್ರಣ ಕೊಠಡಿಯಲ್ಲಿ ಉಪಸ್ಥಿತರಿದ್ದು, ತನಿಖೆ ನಡೆಸುತ್ತಿದ್ದಾರೆ. ಕೆಲ ಹೊತ್ತಿನ ನಂತರ ಗೂಡ್ಸ್​ ರೈಲು ತನ್ನ ಪ್ರಯಾಣವನ್ನು ಪುನರಾರಂಭಿಸಿದೆ.

ರೈಲು ಅಪಘಾತವಾಗುವಂತೆ ಮಾಡುವ ಇಂಥ ಪಿತೂರಿ ಬಯಲಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು, ಕಾನ್ಪುರದ ಬಳಿ ಮಧ್ಯರಾತ್ರಿ ಸಾಬರಮತಿ ಎಕ್ಸ್​ಪ್ರೆಸ್​ ರೈಲು ಹಳಿ ತಪ್ಪಿದರೂ ದೊಡ್ಡ ಅಪಘಾತವಾಗುವುದರಿಂದ ಸ್ವಲ್ಪದರಲ್ಲೇ ತಪ್ಪಿತ್ತು. ವಾರಣಾಸಿಯಿಂದ ಅಹಮದಾಬಾದ್​ಗೆ ತೆರಳುತ್ತಿದ್ದ ರೈಲು ಗೋವಿಂದಪುರಿ ನಿಲ್ದಾಣದ ಬಳಿ ತಪ್ಪಿದ್ದರಿಂದ, 22 ಬೋಗಿಗಳು ಹಳಿಯಿಂದ ಹೊರ ಬಂದಿದ್ದವು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ.

ಇದೇ ರೀತಿಯ ಮತ್ತೊಂದು ಘಟನೆಯಲ್ಲಿ, ಸೆಪ್ಟೆಂಬರ್ 9ರಂದು ಕಾಳಿಂದಿ ಎಕ್ಸ್​ಪ್ರೆಸ್​ ಅನ್ನು ಹಳಿ ತಪ್ಪಿಸುವ ಪ್ರಯತ್ನವಾಗಿ ಕಾನ್ಪುರ-ಕಾಸ್ ಗಂಜ್ ಮಾರ್ಗದಲ್ಲಿ ಬರಾಜ್ ಪುರ ಮತ್ತು ಬಿಲ್ಹೌರ್ ನಿಲ್ದಾಣಗಳ ನಡುವಿನ ಮುಂಡೇರಿ ಗ್ರಾಮದ ಕ್ರಾಸಿಂಗ್ ಬಳಿ ರೈಲ್ವೆ ಹಳಿಯ ಮೇಲೆ ಗ್ಯಾಸ್ ಸಿಲಿಂಡರ್ ಅನ್ನು ಇರಿಸಲಾಗಿತ್ತು. ಗಂಟೆಗೆ 70-80 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ರೈಲು ಸಿಲಿಂಡರ್​ಗೆ ಡಿಕ್ಕಿ ಹೊಡೆದಿತ್ತು. ಆಗ ಚಾಲಕ ತಕ್ಷಣ ರೈಲನ್ನು ನಿಲ್ಲಿಸಿದ್ದರು.

ಇದನ್ನೂ ಓದಿ: ತಿರುಪತಿ ಲಡ್ಡು ಕಲಬೆರಕೆ ವಿವಾದ: 11 ದಿನಗಳ ಪ್ರಾಯಶ್ಚಿತ್ತ ಉಪವಾಸ ವ್ರತ ಕೈಗೊಂಡ ಪವನ್ ಕಲ್ಯಾಣ್ - Pawan Kalyan

Last Updated : 1 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.