ETV Bharat / bharat

10 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಕ್ಕಳು: ಆಧಾರ್​ ನೋಂದಣಿಯಿಂದ ಹೆತ್ತವರ ಮಡಿಲು ಸೇರಿದ್ರು; ಏನಿದು ಕಥೆ? - Aadhaar Enrollment helps to reunit

author img

By ETV Bharat Karnataka Team

Published : Jul 27, 2024, 4:11 PM IST

Updated : Jul 27, 2024, 7:06 PM IST

ಕಳೆದ 10 ವರ್ಷಗಳ ಹಿಂದೆ ಪೋಷಕರಿಂದ ದೂರವಾಗಿದ್ದ ಮಕ್ಕಳು ಇದೀಗ ಆಧಾರ್​ನಿಂದಾಗಿ ಮತ್ತೆ ಪೋಷಕರ ಮಡಿಲು ಸೇರುವಂತೆ ಆಗಿದೆ.

aadhaar-enrollment-helps-to-reunit-their-parents-after-10-years
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)

ಹೈದರಾಬಾದ್​: 10 ವರ್ಷಗಳ ಹಿಂದೆ ಪೋಷಕರಿಂದ ದೂರವಾದ ಮೂವರು ಮಕ್ಕಳು, ಆಧಾರ್​​ ನೋಂದಣಿ ಆಗಿದ್ದರಿಂದ ಮತ್ತೆ ಹೆತ್ತವರ ಮಡಿಲು ಸೇರುವಂತಾಗಿದೆ. ಸಣ್ಣವರಾಗಿದ್ದಾಗ ಪೋಷಕರು ಮಾಡಿಸಿದ ಆಧಾರ್​​ ನೆರವಿನಿಂದಾಗಿ ಇದೀಗ ಪೋಷಕರಿಂದ ದೂರವಾಗಿ ಅನಾಥಶ್ರಮ ಸೇರಿದ್ದ ಮಕ್ಕಳು ಮತ್ತೆ ತಂದೆ - ತಾಯಿಯ ಮಡಿಲು ಸೇರುವಲ್ಲಿ ಯಶಸ್ವಿಯಾಗಿದ್ದಾರೆ.

ಗುಂಟೂರು ಜಿಲ್ಲೆಯ ಕೊಟ್ಟಪ್ಪಕೊಂಡ ಶ್ರಿನು ಮತ್ತು ನಾಗೇಂದ್ರ ದಂಪತಿಯ ಮಕ್ಕಳು 10 ವರ್ಷದ ಹಿಂದೆ ನಾಪತ್ತೆಯಾಗಿದ್ದರು. ಕೊಟ್ಟಪ್ಪಕೊಂಡುವಿನಿಂದ ಹೈದರಾಬಾದ್​ನ ಎಲ್​ಬಿ ನಗರ ಪ್ರದೇಶಕ್ಕೆ ವಲಸೆ ಬಂದ ಈ ದಂಪತಿ ಕೂದಲು ವ್ಯಾಪಾರ ಮಾಡುತ್ತಿದ್ದರು. ಅವರ ಮಕ್ಕಳಾದ 12 ವರ್ಷದ ರಾಜು ಮತ್ತು 10 ವರ್ಷದ ಇಮ್ಯಾನುಯಲ್​ ಮನೆಯಿಂದ ತಪ್ಪಿಸಿಕೊಂಡಿದ್ದರು.

ಮತ್ತೊಂದು ಪ್ರಕರಣದಲ್ಲಿ 2015ರಲ್ಲಿ ಮೆದಕ್​ ಜಿಲ್ಲೆಯ ಶಿವ್ವಮ್​ಪೇಟೆ ಮಂಡಲ್​ನ ಮಗ್ಧುಂಪುರ್​ ಬೆಥಾನಿ ಅನಾಥಶ್ರಮಕ್ಕೆ ವೆಂಕಟೇಶ್​ ಎಂಬ 12 ವರ್ಷದ ಬಾಲಕನನ್ನು ಬಾಲಕರ ಕಲ್ಯಾಣ ಸಮಿತಿ ಸದಸ್ಯರು ಮತ್ತು ಹೈದರಾಬಾದ್​ ಪೊಲೀಸರ ಸಹಾಯದಿಂದ ದಾಖಲಿಸಿದ್ದರು. ವೆಂಕಟೇಶ್​ ಎಂಬ ಈ ಬಾಲಕ ಕರೀಂನಗರ ಜಿಲ್ಲೆಯ ಢಮ್ಮೈಪೇಟ್​​ನ ಲಕ್ಷ್ಮೀ ಮತ್ತು ಮಲ್ಲಯ್ಯ ಅವರ ದೊಡ್ಡ ಮಗನಾಗಿದ್ದಾನೆ. 12 ವರ್ಷದವನಿದ್ದಾಗ ರಸ್ತೆ ಅಪಘಾತಕ್ಕೆ ಒಳಗಾಗಿದ್ದ ಈತನ ಕೈ ಮುರಿದಿದ್ದು, ಈತನಿಗೆ ವೆಮುಲವಾಡ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಈ ಮೂವರಿಗೂ ಆಧಾರ್ ಇಲ್ಲದಿರುವ ಕುರಿತು ಆಶ್ರಮದ ಆಡಳಿತಾಧಿಕಾರಿ ನರಸಾಪುರ ನ್ಯಾಯಾಲಯದ ನ್ಯಾಯಾಧೀಶೆ ಅನಿತಾ ಅವರ ಗಮನಕ್ಕೆ ತಂದಿದ್ದರು. ಈ ಸಂಬಂಧ ತಹಸೀಲ್ದಾರ್ ಶ್ರೀನಿವಾಸಚಾರಿ ಹಾಗೂ ಎಂಪಿಡಿಒ ನಾಗೇಶ್ವರ್ ಅವರಿಗೆ ಇದೇ 19ರಂದು ಹೈದರಾಬಾದ್‌ನ ಮಾದಾಪುರ ಶಾಶ್ವತ ಆಧಾರ್ ಕೇಂದ್ರದಲ್ಲಿ ನೋಂದಣಿ ಮಾಡುವಂತೆ ನ್ಯಾಯಾಧೀಶರು ಆದೇಶಿಸಿದ್ದರು.

ಅಧಿಕಾರಿಗಳು ಇವರಿಗೆ ಆಧಾರ್​​ ನೋಂದಣಿ ಮಾಡಿಸುವಾಗ ಈಗಾಗಲೇ ಆಧಾರ್ ನೋಂದಣಿ ಆಗಿರುವ ವಿಚಾರ ಬೆಳಕಿಗೆ ಬಂದಿತ್ತು. ಇದರ ಆಧಾರದ ಮೇಲೆ ಮಾಹಿತಿ ಸಂಗ್ರಹಿಸಿದ ಅಧಿಕಾರಿಗಳು ಈ ವಿಚಾರ ಕುರಿತು ಅವರ ಪೋಷಕರಿಗೆ ಮಾಹಿತಿ ಕೂಡಾ ನೀಡಿದ್ದರು. ಮಕ್ಕಳ ಸುಳಿವು ಸಿಕ್ಕ ಪೋಷಕರು, ಮಾಹಿತಿ ನೀಡಿದವರ ಬಳಿ ಬಂದು ಕಳೆದುಕೊಂಡು ಮಕ್ಕಳನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ, ಅಧಾಪುರ ಆಧಾರ್ ಕೇಂದ್ರದ ಪ್ರಾದೇಶಿಕ ವ್ಯವಸ್ಥಾಪಕಿ ಭವಾನಿ ಪ್ರಸಾದ್, ಆಶ್ರಮದ ಫಾದರ್ ಸಾಜಿ ವರ್ಗೀಸ್, ಕ್ಯಾಂಪಸ್ ಉಸ್ತುವಾರಿ ವಿನ್ಸೆಂಟ್, ಸಮಾಜ ಸೇವಕ ವೀರಬಾಬು, ಸಿಸ್ಟರ್ ಕರ್ಮಲ್ ಉಪಸ್ಥಿತರಿದ್ದರು.

ಇದನ್ನೂ ಓದಿ: ವ್ಯಕ್ತಿ ಮೃತಪಟ್ಟ ಮೇಲೆ ಆಧಾರ್ ಕಾರ್ಡ್​ ಏನಾಗುತ್ತೆ?: ಸರಂಡರ್​ ಮಾಡಬೇಕಾ? ಇರುವ ಮಾರ್ಗಗಳೇನು?

ಹೈದರಾಬಾದ್​: 10 ವರ್ಷಗಳ ಹಿಂದೆ ಪೋಷಕರಿಂದ ದೂರವಾದ ಮೂವರು ಮಕ್ಕಳು, ಆಧಾರ್​​ ನೋಂದಣಿ ಆಗಿದ್ದರಿಂದ ಮತ್ತೆ ಹೆತ್ತವರ ಮಡಿಲು ಸೇರುವಂತಾಗಿದೆ. ಸಣ್ಣವರಾಗಿದ್ದಾಗ ಪೋಷಕರು ಮಾಡಿಸಿದ ಆಧಾರ್​​ ನೆರವಿನಿಂದಾಗಿ ಇದೀಗ ಪೋಷಕರಿಂದ ದೂರವಾಗಿ ಅನಾಥಶ್ರಮ ಸೇರಿದ್ದ ಮಕ್ಕಳು ಮತ್ತೆ ತಂದೆ - ತಾಯಿಯ ಮಡಿಲು ಸೇರುವಲ್ಲಿ ಯಶಸ್ವಿಯಾಗಿದ್ದಾರೆ.

ಗುಂಟೂರು ಜಿಲ್ಲೆಯ ಕೊಟ್ಟಪ್ಪಕೊಂಡ ಶ್ರಿನು ಮತ್ತು ನಾಗೇಂದ್ರ ದಂಪತಿಯ ಮಕ್ಕಳು 10 ವರ್ಷದ ಹಿಂದೆ ನಾಪತ್ತೆಯಾಗಿದ್ದರು. ಕೊಟ್ಟಪ್ಪಕೊಂಡುವಿನಿಂದ ಹೈದರಾಬಾದ್​ನ ಎಲ್​ಬಿ ನಗರ ಪ್ರದೇಶಕ್ಕೆ ವಲಸೆ ಬಂದ ಈ ದಂಪತಿ ಕೂದಲು ವ್ಯಾಪಾರ ಮಾಡುತ್ತಿದ್ದರು. ಅವರ ಮಕ್ಕಳಾದ 12 ವರ್ಷದ ರಾಜು ಮತ್ತು 10 ವರ್ಷದ ಇಮ್ಯಾನುಯಲ್​ ಮನೆಯಿಂದ ತಪ್ಪಿಸಿಕೊಂಡಿದ್ದರು.

ಮತ್ತೊಂದು ಪ್ರಕರಣದಲ್ಲಿ 2015ರಲ್ಲಿ ಮೆದಕ್​ ಜಿಲ್ಲೆಯ ಶಿವ್ವಮ್​ಪೇಟೆ ಮಂಡಲ್​ನ ಮಗ್ಧುಂಪುರ್​ ಬೆಥಾನಿ ಅನಾಥಶ್ರಮಕ್ಕೆ ವೆಂಕಟೇಶ್​ ಎಂಬ 12 ವರ್ಷದ ಬಾಲಕನನ್ನು ಬಾಲಕರ ಕಲ್ಯಾಣ ಸಮಿತಿ ಸದಸ್ಯರು ಮತ್ತು ಹೈದರಾಬಾದ್​ ಪೊಲೀಸರ ಸಹಾಯದಿಂದ ದಾಖಲಿಸಿದ್ದರು. ವೆಂಕಟೇಶ್​ ಎಂಬ ಈ ಬಾಲಕ ಕರೀಂನಗರ ಜಿಲ್ಲೆಯ ಢಮ್ಮೈಪೇಟ್​​ನ ಲಕ್ಷ್ಮೀ ಮತ್ತು ಮಲ್ಲಯ್ಯ ಅವರ ದೊಡ್ಡ ಮಗನಾಗಿದ್ದಾನೆ. 12 ವರ್ಷದವನಿದ್ದಾಗ ರಸ್ತೆ ಅಪಘಾತಕ್ಕೆ ಒಳಗಾಗಿದ್ದ ಈತನ ಕೈ ಮುರಿದಿದ್ದು, ಈತನಿಗೆ ವೆಮುಲವಾಡ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಈ ಮೂವರಿಗೂ ಆಧಾರ್ ಇಲ್ಲದಿರುವ ಕುರಿತು ಆಶ್ರಮದ ಆಡಳಿತಾಧಿಕಾರಿ ನರಸಾಪುರ ನ್ಯಾಯಾಲಯದ ನ್ಯಾಯಾಧೀಶೆ ಅನಿತಾ ಅವರ ಗಮನಕ್ಕೆ ತಂದಿದ್ದರು. ಈ ಸಂಬಂಧ ತಹಸೀಲ್ದಾರ್ ಶ್ರೀನಿವಾಸಚಾರಿ ಹಾಗೂ ಎಂಪಿಡಿಒ ನಾಗೇಶ್ವರ್ ಅವರಿಗೆ ಇದೇ 19ರಂದು ಹೈದರಾಬಾದ್‌ನ ಮಾದಾಪುರ ಶಾಶ್ವತ ಆಧಾರ್ ಕೇಂದ್ರದಲ್ಲಿ ನೋಂದಣಿ ಮಾಡುವಂತೆ ನ್ಯಾಯಾಧೀಶರು ಆದೇಶಿಸಿದ್ದರು.

ಅಧಿಕಾರಿಗಳು ಇವರಿಗೆ ಆಧಾರ್​​ ನೋಂದಣಿ ಮಾಡಿಸುವಾಗ ಈಗಾಗಲೇ ಆಧಾರ್ ನೋಂದಣಿ ಆಗಿರುವ ವಿಚಾರ ಬೆಳಕಿಗೆ ಬಂದಿತ್ತು. ಇದರ ಆಧಾರದ ಮೇಲೆ ಮಾಹಿತಿ ಸಂಗ್ರಹಿಸಿದ ಅಧಿಕಾರಿಗಳು ಈ ವಿಚಾರ ಕುರಿತು ಅವರ ಪೋಷಕರಿಗೆ ಮಾಹಿತಿ ಕೂಡಾ ನೀಡಿದ್ದರು. ಮಕ್ಕಳ ಸುಳಿವು ಸಿಕ್ಕ ಪೋಷಕರು, ಮಾಹಿತಿ ನೀಡಿದವರ ಬಳಿ ಬಂದು ಕಳೆದುಕೊಂಡು ಮಕ್ಕಳನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ, ಅಧಾಪುರ ಆಧಾರ್ ಕೇಂದ್ರದ ಪ್ರಾದೇಶಿಕ ವ್ಯವಸ್ಥಾಪಕಿ ಭವಾನಿ ಪ್ರಸಾದ್, ಆಶ್ರಮದ ಫಾದರ್ ಸಾಜಿ ವರ್ಗೀಸ್, ಕ್ಯಾಂಪಸ್ ಉಸ್ತುವಾರಿ ವಿನ್ಸೆಂಟ್, ಸಮಾಜ ಸೇವಕ ವೀರಬಾಬು, ಸಿಸ್ಟರ್ ಕರ್ಮಲ್ ಉಪಸ್ಥಿತರಿದ್ದರು.

ಇದನ್ನೂ ಓದಿ: ವ್ಯಕ್ತಿ ಮೃತಪಟ್ಟ ಮೇಲೆ ಆಧಾರ್ ಕಾರ್ಡ್​ ಏನಾಗುತ್ತೆ?: ಸರಂಡರ್​ ಮಾಡಬೇಕಾ? ಇರುವ ಮಾರ್ಗಗಳೇನು?

Last Updated : Jul 27, 2024, 7:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.