ವಿಡಿಯೋ: ಬರಗಾಲದಿಂದ ಅನ್ನದಾತನ ಕಣ್ಣೀರು.. ಬೆಳೆಯ ಮಧ್ಯೆ ಬಿದ್ದು ಗೊಳಾಡಿದ ರೈತ!

By

Published : Jul 20, 2022, 7:08 PM IST

thumbnail

ಪಾಟ್ನಾ(ಬಿಹಾರ): ಕೆಲ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಿದ್ದರಿಂದ ರೈತರು ಬೆಳೆದ ಬೆಳೆ ಸಂಪೂರ್ಣವಾಗಿ ಕೈಕೊಟ್ಟಿದೆ. ಇದರ ಮಧ್ಯೆ ಬಿಹಾರದಲ್ಲಿ ಬರಗಾಲ ಪರಸ್ಥಿತಿ ನಿರ್ಮಾಣಗೊಂಡಿದ್ದು, ಅನ್ನದಾತರು ಕಂಗಾಲಾಗಿದ್ದಾರೆ. ರೈತನೊಬ್ಬ ತಾನು ಬೆಳೆದ ಖಾರಿಫ್​​ ಬೆಳೆಯ ಮಧ್ಯೆ ಬಿದ್ದು ಗೊಳಾಡಿದ್ದಾನೆ. ಅದರ ವಿಡಿಯೋ ಸದ್ಯ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ. ಆದರೆ, ಯಾವಾಗ ಈ ಘಟನೆ ನಡೆದಿದೆ ಎಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಮಳೆಯ ಅಭಾವದಿಂದ ರೈತ ಭತ್ತದ ಗದ್ದೆಯಲ್ಲಿ ತನ್ನ ಅಳಲು ತೋಡಿಕೊಂಡಿದ್ದಾನೆ. ಬಿಹಾರದಲ್ಲಿ ಜೂನ್​ 15ರ ಬಳಿಕ ಮಳೆ ಆರಂಭಗೊಂಡಿದೆ. ಆದರೆ,ಜುಲೈ ತಿಂಗಳಲ್ಲಿ ಮಳೆ ಕೈಕೊಟ್ಟ ಕಾರಣ ಖಾರಿಫ್​ ಬೆಳೆಗಳು ಒಣಗಲು ಶುರುವಾಗಿವೆ. ಇದರಿಂದ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.