ಅಣುಬಾಂಬ್ನಿಂದ ತತ್ತರಿಸಿದ ಜಪಾನ್ ಬದುಕಿಸಿದ್ದು 'ಮಿಯಾವಾಕಿ ಅರಣ್ಯ': ಇದೀಗ ದಾವಣಗೆರೆಯಲ್ಲೂ ಅನುಷ್ಠಾನ - ಜಾಗತಿಕ ತಾಪಮಾನ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-12758387-thumbnail-3x2-dvg.jpg)
ದಾವಣಗೆರೆ: 1945ರ 2ನೇ ಮಹಾಯುದ್ಧದಲ್ಲಿ ಜಪಾನಿನ ಹಿರೋಶಿಮಾ ಹಾಗೂ ನಾಗಾಸಾಕಿ ಮಹಾನಗರಗಳ ಮೇಲೆ ಅಮೆರಿಕ ಹಾಕಿದ ಪರಮಾಣು ಬಾಂಬ್ನಿಂದ ಆ ದೇಶ ಬಹುತೇಕ ಸರ್ವನಾಶವೇ ಆಗಿತ್ತು ಎಂದುಕೊಂಡಿದ್ದರು. ಆದರೆ, ಅಂದು ಅಲ್ಲೊಬ್ಬ ಚಿಂತಕ ದೇಶಕ್ಕೆ ಮರುಜೀವ ನೀಡಲು, ನಗರ ಅರಣ್ಯೀಕರಣ ಪದ್ಧತಿ ಅನುಷ್ಠಾನಕ್ಕೆ ತಂದ. ಬಳಿಕ ಪುಟ್ಟ ದೇಶ ಪುಟಿದೆದ್ದು, ಜಗತ್ತಿಗೆ ಮಾದರಿಯಾಯ್ತು. ಇದೀಗ ಅದೇ ಜಪಾನ್ ಮಾದರಿ ಅನುಷ್ಠಾನಕ್ಕೆ ದಾವಣಗೆರೆ ನಗರ ಸಜ್ಜಾಗಿದೆ.