ಹುತ್ತಕ್ಕೆ ಹಾಲೆರೆಯಬೇಡಿ, ಹಾವು ಸಾಯುತ್ತದೆ: ಸ್ನೇಕ್ ಶ್ಯಾಮ್ ಸಲಹೆ
ಮೈಸೂರು: ನಾಗರ ಪಂಚಮಿಯ ದಿನ ಜನರು ಹುತ್ತಕ್ಕೆ ಹಾಲೆರೆದರೆ ಹಾವು ಸಾಯುತ್ತದೆ. ಹಾಲಿನ ಜೊತೆ ಅರಿಶಿಣ ಕುಂಕುಮ ಸೇರಿ ಹಾಲು ಹುತ್ತಕ್ಕೆ ಹೋದರೆ ಹಾವು ಸಾಯುವ ಸಾಧ್ಯತೆ ಹೆಚ್ಚು. ಇದರ ಬದಲು, ಬೆಳ್ಳಿಯ ನಾಗರ ವಿಗ್ರಹಕ್ಕೆ ಹಾಲೆರೆದರೆ ಒಳ್ಳೆಯದು ಎಂದು ಉರಗ ತಜ್ಞ, ಸ್ನೇಕ್ ಶ್ಯಾಮ್ ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಸಲಹೆ ನೀಡಿದರು.