thumbnail

'ವಿಕ್ರಾಂತ್ ರೋಣ' ಪ್ಯಾನ್​ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್​ ಸಿನಿಮಾ'... ಉಪ್ಪಿ ಮಾತಿನಲ್ಲೇ ಕೇಳಿ!

By

Published : Jul 26, 2022, 9:08 PM IST

Updated : Jul 26, 2022, 9:38 PM IST

ವಿಕ್ರಾಂತ್ ರೋಣ ಪ್ರೀ ರಿಲೀಸ್​ ಇವೆಂಟ್​ನಲ್ಲಿ ಸೂಪರ್ ಸ್ಟಾರ್​ ಉಪೇಂದ್ರ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು ನನ್ನ ಸುದೀಪ್ ನಡುವಿನ ಸಂಬಂಧ ಸುಮಾರು 25-30 ವರ್ಷ ಹಳೆಯದು. ಈ ಹಿಂದೆ ನಾನು ಡೈರೆಕ್ಟರ್ ಆಗಿದ್ದ ಸಮಯದಲ್ಲಿ ನನ್ನ ಹತ್ತಿರ ಬಂದು ಡೈರೆಕ್ಟರ್​ ಆಗ್ತೀನಿ ಅಂದಿದ್ರು. ಆ ಸಮಯದಲ್ಲಿ ನೀವ್ಯಾಕ್ರಿ ಡೈರೆಕ್ಟರ್ ಆಗ್ತೀರಾ?, ಆರು ಕಾಲು ಅಡಿ ಕಟೌಟ್​ ನೀವೂ, ಹೀರೋ ಆಗ್ರಿ ಎಂದು ಹೇಳಿದ್ದೆ. ಇದೀಗ ಅವರು ದೊಡ್ಡ ಮಟ್ಟದ ಸೂಪರ್​ ಸ್ಟಾರ್​ ಆಗಿದ್ದಾರೆ. 'ವಿಕ್ರಾಂತ್ ರೋಣ' ಮೂರು ವರ್ಷಗಳ ಪರಿಶ್ರಮ. ಸಿನಿಮಾ ನಿಜಕ್ಕೂ ಅದ್ಭುತವಾಗಿ ಮೂಡಿ ಬಂದಿದ್ದು, ನಾನೂ ಸಿನಿಮಾ ಥಿಯೇಟರ್​​ನಲ್ಲಿ ಕುಳಿತುಕೊಂಡು ಚಿತ್ರ ವೀಕ್ಷಣೆ ಮಾಡಲಿದ್ದೇನೆ ಎಂದರು. ಇದು ಕೇವಲ ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ, ಪ್ಯಾನ್​ ವರ್ಲ್ಡ್ ಸಿನಿಮಾ ಆಗಲಿದೆ. ಕನ್ನಡಿಗರು ಯಾರಿಗೂ ಕಮ್ಮಿ ಇಲ್ಲ ಎಂದು ಹೇಳಿ ಯಶ್​ ಇಂಡಿಯಾ ತುಂಬ ಫೇಮಸ್ ಆದ್ರೂ. ಜೊತೆಗೆ ಇಂಡಿಯಾದ ಬಾಕ್ಸ್ ಆಫೀಸ್​ ಹೊಡೆದರು. ಇದೀಗ ಸುದೀಪ್​ ವರ್ಲ್ಡ್ ಬಾಕ್ಸ್ ಆಫೀಸಿ​​ ಹೊಡೆಯಲು ಹೋಗ್ತಾರೆ. ವಿಕ್ರಾಂತ್ ರೋಣ ವಿಕ್ಟರಿ ರೋಣ ಆಗಲಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಉಪೇಂದ್ರ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು.
Last Updated : Jul 26, 2022, 9:38 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.