ನ್ಯಾಯ ತೀರ್ಪು ನೀಡುವ ಕೋರ್ಟ್ ಆವರಣದಲ್ಲಿ 'ಯಕ್ಷಗಾನ ವೈಭವ' - Yakshagana play
🎬 Watch Now: Feature Video

ಮಂಗಳೂರು: ಇಲ್ಲಿನ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಲಯದ ಆವರಣ ಪೂರ್ತಿ ಇಂದು ಜನಜಂಗುಳಿಯಿಂದ ಗಿಜಿಗುಡುತ್ತಿತ್ತು. ಆದರೆ ಈ ಜನಜಂಗುಳಿ ಯಾವುದೇ ನ್ಯಾಯ ತೀರ್ಮಾನದ ಬಗ್ಗೆ ಕುತೂಹಲಕ್ಕೆ ಆಗಿರೋದಲ್ಲ. ಬದಲಾಗಿ ಇಂದು ಕೋರ್ಟ್ ಆವರಣ ಯಕ್ಷವೈಭವಕ್ಕೆ ಸಾಕ್ಷಿಯಾಗಿತ್ತು. ಮಂಗಳೂರು ವಕೀಲರ ಸಂಘ ಹಾಗೂ ಯಕ್ಷಾಭಿಮಾನಿ ವಕೀಲರ ಸಂಘದಿಂದ ಈ ಯಕ್ಷಗಾನ ಆಯೋಜನೆಗೊಂಡಿತ್ತು. ನ್ಯಾಯಾಲಯದಲ್ಲಿ ಸದಾ ಕರಿಕೋಟಿನಲ್ಲಿ ಇರುತ್ತಿದ್ದ ನ್ಯಾಯಾಧೀಶರು, ವಕೀಲರು ಇಂದು ಯಕ್ಷಗಾನದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚುತ್ತಿದ್ದರು.