ವಿಜಯಪುರದಲ್ಲಿ ಲಾರಿ ಚಾಲಕನಿಗೆ ಮಹಿಳೆಯಿಂದ ತರಾಟೆ
ಮಹಿಳೆಯೊಬ್ಬರು ಬೆಂಗಳೂರಿನಿಂದ ಬಂದಿದ್ದ ಲಾರಿ ತಡೆದು ಚಾಲಕ ಹಾಗೂ ಕ್ಲೀನರ್ ಇಬ್ಬರನ್ನು ತಡೆದು ನೀವು ಎಲ್ಲಿಂದ ಬಂದಿದ್ದೀರಿ? ಕೊರೊನಾ ಇರೋದು ಗೊತ್ತಿಲ್ಲವಾ ನಿಮಗೆ?. ವಾಹನ ಸಂಚಾರ ಬಂದ್ ಅಂದ್ರೆ ಬಂದ್ ಅಷ್ಟೇ. ಯಾವುದೇ ವಾಹನಗಳು ಊರೊಳಗೆ ಬರೋದು ಬೇಡ. ಊರೊಳಗೆ ಯಾರೂ ಬರುವಂತಿಲ್ಲ, ಊರ ಹೊರಗೆ ಲಾರಿ ನಿಲ್ಲಿಸಿ ಎಂದು ಕ್ಲಾಸ್ ತೆಗೆದುಕೊಂಡಿರುವ ಘಟನೆ ನಿಡಗುಂದಿ ತಾಲೂಕಿನ ಗೊಳಸಂಗಿಯಲ್ಲಿ ನಡೆಯಿತು. ಈ ಘಟನೆಯ ವಿಡಿಯೋ ಇಲ್ಲಿದೆ.