ಮೋದಿ ದೀಪ ಬೆಳಗಿಸುವ ಕಾರ್ಯಕ್ರಮಕ್ಕೆ ಸ್ವಾಗತ: ದಿಂಗಾಲೇಶ್ವರ ಶ್ರೀ
ಗದಗ : ನವೆಂಬರ್ನಲ್ಲಿ ಹುಟ್ಟಿರುವ ಕೊರೊನಾ ವೈರಸ್ಗೆ ದೀಪವೆ ಮದ್ದು, ಪ್ರಧಾನಿ ನರೇಂದ್ರ ಮೋದಿಯವರು ಇದನ್ನು ಅರಿತು ಈ ನಾಡಿಗೆ ದೀಪಾರಾಧನೆ ಮಾಡಲು ಸೂಚನೆ ನೀಡಿದ್ದಾರೆ. ಅವರ ಈ ದೀಪ ಬೆಳಗಿಸುವ ಕಾರ್ಯಕ್ರಮಕ್ಕೆ ಸ್ವಾಗತ ಅಂತ ಬಾಲೆಹೊಸೂರು ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ. ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸರು ಮಠದಲ್ಲಿ ಮಾತನಾಡಿರೋ ಅವ್ರು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿರುವ ದೀಪ ಬೆಳಗಿಸುವ ಕಾರ್ಯಕ್ರಮಕ್ಕೆ ಸ್ವಾಗತ, ನಮ್ಮ ಭಾರತದ ಹಿಂದೂ ಸಂಸ್ಕೃತಿ ವೈಜ್ಞಾನಿಕವಾಗಿರುವಂತದ್ದು, ಕಂಟಕ ಇರುವ ಕೀಟಗಳು ಭೂಮಿ ಮೇಲೆ ಇರಬಾರದು ಎನ್ನುವ ಉದ್ದೇಶದಿಂದ ದೀಪ ಬೆಳಗಲಾಗುತ್ತೆ ಎಂದರು.
TAGGED:
Dingaleshwara Sri news