thumbnail

ಚಳಿ ಮಧ್ಯೆ ಬಸ್ ನಿಲ್ದಾಣಗಳಲ್ಲಿ ರಾತ್ರಿ ಕಳೆದ‌ ಪ್ರಯಾಣಿಕರು

By

Published : Dec 12, 2020, 10:34 AM IST

ಬೆಂಗಳೂರು: ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂದು ಒತ್ತಾಯಿಸಿ ಸಾರಿಗೆ ನೌಕರರು ಕರೆ ನೀಡಿರುವ ಬಸ್ ಮುಷ್ಕರಕ್ಕೆ ಪ್ರಯಾಣಿಕರು ಕಂಗಲಾಗಿದ್ದಾರೆ. ರಾಜಧಾನಿಯಿಂದ ನಗರ ಹಾಗೂ ವಿವಿಧ ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರು ಸರ್ಕಾರಿ ಬಸ್​ಗಳಿಲ್ಲದೆ ಪರದಾಡುತ್ತಿದ್ದಾರೆ‌. ತಡರಾತ್ರಿವರೆಗೂ ಬಸ್ ಸಿಗುವ ಆಶಾಭಾವನೆಯಿಂದ ಮೆಜೆಸ್ಟಿಕ್ ಸೇರಿದಂತೆ ಪ್ರಮುಖ ಬಸ್ ನಿಲ್ದಾಣಗಳಲ್ಲಿ‌‌‌‌ ಪ್ರಯಾಣಿಕರು ಬಸ್​ಗಾಗಿ‌ ಕಾದು ಸುಸ್ತಾಗಿ ಮಲಗಿದ ಘಟನೆ ನಡೆದಿದೆ. ಕೊರೊನಾ ಭೀತಿ ನಡುವೆಯೂ ಬಸ್ ನಿಲ್ದಾಣಗಳಲ್ಲಿ ರಾತ್ರಿ ಕಳೆದಿರುವ ಪ್ರಯಾಣಿಕರು, ಚಳಿ ಮಧ್ಯೆ ಸರಿಯಾದ ಹೊದಿಕೆಯೂ ಇಲ್ಲದೇ ತೊಂದರೆ ಅನುಭವಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.