thumbnail

By

Published : May 3, 2020, 2:41 PM IST

ETV Bharat / Videos

ಪರಿಹಾರ ನಿಧಿ ಹಣ ಬಳಸಿ ರೈತರಿಗೆ ಸಹಾಯ ಮಾಡಿ: ರಾಜ್ಯ ರೈತ ಸಂಘದ ಮಾಜಿ ಅಧ್ಯಕ್ಷ ಕೆ.ಟಿ.ಗಂಗಾಧರ್

ಕೊರೊನಾ ಲಾಕ್​ಡೌನ್​​ನಿಂದ ರೈತರು ಅನುಭವಿಸುತ್ತಿರುವ ಸಂಕಷ್ಟಗಳ ಕುರಿತು ರಾಜ್ಯ ರೈತ ಸಂಘದ ಮಾಜಿ ಅಧ್ಯಕ್ಷ ಕೆ.ಟಿ. ಗಂಗಾಧರ್​ ಈಟಿವಿ ಭಾರತ್​ ನೇರಪ್ರಸಾರದಲ್ಲಿ ಮಾತನಾಡಿದ್ದಾರೆ. ಲಾಕ್​ಡೌನ್​​ನಿಂದಾಗಿ ರೈತರಿಗೆ ಮಾರುಕಟ್ಟೆ ಸಿಗದೇ ತೊಂದರೆಗೀಡಾಗಿದ್ದಾರೆ. ಹೀಗಾಗಿ ಸರ್ಕಾರ ಅವರ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು, ಪರಿಹಾರ ನಿಧಿ ಹಣ ಬಳಸಿ ರೈತರಿಗೆ ಸಹಾಯ ಮಾಡಬೇಕು. ನಮ್ಮಲ್ಲಿ ಆಹಾರ ಬೆಳೆಗಳ ಉತ್ಪಾದನೆ ಚೆನ್ನಾಗಿದೆ. ಆದರೆ ಅವುಗಳ ಕೋಲ್ಡ್​​ ಸ್ಟೋರಿಂಗ್​ ಸಮಸ್ಯೆ ಇದ್ದು, ಅದಕ್ಕೆ ಸೂಕ್ತ ವ್ಯವಸ್ಥೆಯಾಗಬೇಕು. ಸದ್ಯದ ಗಂಭೀರ ಸ್ಥಿತಿಯಲ್ಲಿ ಲಾಕ್​ಡೌನ್​ ಮುಂದುವರಿಕೆ ಒಳ್ಳೆಯದೆ. ರೈತರು ಈ ಸಮಯದಲ್ಲಿ ಧೈರ್ಯದಿಂದಿರಬೇಕು ಎಂದು ಹೇಳಿದ್ರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.