ಗಂಗಾವತಿ: ಹನುಮನಿಗೆ ಶ್ರೀರಾಮನ ವಿಶೇಷ ಪ್ರಸಾದ ಸಮರ್ಪಣೆ - anjanadri hanuma temple
🎬 Watch Now: Feature Video

ಗಂಗಾವತಿ: ಅಯೋಧ್ಯೆಯಲ್ಲಿನ ಶ್ರೀರಾಮನ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ತರಲಾದ ವಿಶೇಷ ಪ್ರಸಾದವನ್ನು ಕಿಷ್ಕಿಂಧ ಹನುಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಸ್ವಾಮಿ ಗೋವಿಂದಾನಂದ ಸರಸ್ವತಿ, ಅಂಜನಾದ್ರಿಯಲ್ಲಿ ಸಮಪರ್ಸಿದರು. ವಿಶೇಷ ವಸ್ತ್ರ, ನಾರಿಕೇಳ, ಯಜ್ಞೋಪವತಿ, ಜಪಮಾಲೆ ಸೇರಿದಂತೆ ನಾನಾ ಮಂಗಳ ದ್ರವ್ಯಗಳ ತಟ್ಟೆಯನ್ನು ಸ್ವಾಮೀಜಿ, ಹನುಮನಿಗೆ ಸಮರ್ಪಿಸಿ ಪೂಜೆ ಸಲ್ಲಿಸಿದರು. ಬಳಿಕ ವಸ್ತ್ರವನ್ನು ಹನುಮ ವಿಗ್ರಹದ ಮೇಲೆ ಇರಿಸಬೇಕು. ಬರುವ ಭಕ್ತರಿಗೆ ವಿಶೇಷ ಪ್ರಸಾದವನ್ನು ನೀಡಬೇಕೆಂದು ಕೋರಿದರು. ಅತಿ ಶೀಘ್ರವಾಗಿ ಕಿಷ್ಕಿಂಧ ರಥಯಾತ್ರೆ ರಾಜ್ಯದಾದ್ಯಂತ ಸಂಚರಿಸಲಿದ್ದು, ಅಂಜನಾದ್ರಿಯ ಮಹತ್ವ ಇಡೀ ಮನುಕುಲಕ್ಕೆ ತಿಳಿಸುವ ವಿಚಾರವಿದೆ ಎಂದು ಸ್ವಾಮೀಜಿ ತಿಳಿಸಿದರು.