ಪ್ಯಾಸೆಂಜರ್ ರೈಲು ಓಡಾಟವಿಲ್ಲದೆ ಸಂಕಷ್ಟದಲ್ಲಿ ಪೇರಲ ಹಣ್ಣು ಬೆಳೆದ ರೈತರು!
ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಳಸೂರು ಕೊಳೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಪೇರಲ ಹಣ್ಣು ಬೆಳೆಯಲಾಗುತ್ತಿದೆ. ದಿನನಿತ್ಯ ಕ್ವಿಂಟಾಲ್ಗಟ್ಟಲೆ ಬರುವ ಫಸಲನ್ನು ಪ್ಯಾಸೆಂಜರ್ ಟ್ರೈನ್ಗಳಲ್ಲಿ ಭಾರೀ ಬೇಡಿಕೆ ಇತ್ತು. ಆದರೆ ಕಳೆದ ಐದು ತಿಂಗಳಿಂದ ಕೊರೊನಾದಿಂದ ಪ್ಯಾಸೆಂಜರ್ ಟ್ರೈನ್ ಓಡಾಟ ನಿಂತಿದೆ. ಪರಿಣಾಮ ರೈತರಿಗೆ ಲಕ್ಷಾಂತರ ರೂಪಾಯಿ ಅದಾಯ ತರುತ್ತಿದ್ದ ಪೇರಲ ಹಣ್ಣುಗಳು ಕೊಳೆಯಲಾರಂಭಿಸಿವೆ. ರೈಲು ಓಡಾಟ ಇಲ್ಲದ ಕಾರಣ ತಮ್ಮ ಪೇರಲ ಹಣ್ಣುಗಳಿಗೆ ಬೇಡಿಕೆ ಇಲ್ಲದಂತಾಗಿದೆ ಎನ್ನುತ್ತಿದ್ದಾರೆ ಇಲ್ಲಿಯ ರೈತರು.