ವ್ಯಾಕ್ಸಿನ್ ಬಗ್ಗೆ ಕೆಲ ಚರ್ಚ್ಗಳಲ್ಲಿ ಅಪಪ್ರಚಾರ ಆರೋಪ: ಸೂಕ್ತ ಕ್ರಮಕ್ಕೆ ಸಂಸದೆ ಕರಂದ್ಲಾಜೆ ಆಗ್ರಹ - ಮೂಡಿಗೆರೆ, ಆಲ್ದೂರಿನ ಕೆಲಭಾಗದಲ್ಲಿ ಅಪಪ್ರಚಾರ
🎬 Watch Now: Feature Video

ಚಿಕ್ಕಮಗಳೂರು: ವ್ಯಾಕ್ಸಿನ್ ತಗೋಬೇಡಿ ಎಂದು ಜಿಲ್ಲೆಯ ಮೂಡಿಗೆರೆ, ಆಲ್ದೂರಿನ ಕೆಲ ಚರ್ಚ್ಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಮತಾಂತರಗೊಂಡವರು ಚರ್ಚಿಗೆ ಹೋದಾಗ ಅಪಪ್ರಚಾರ ನಡೆಯುತ್ತಿದ್ದು, ಯಾರು, ಏಕೆ ಹೀಗೆ ಹೇಳುತ್ತಿದ್ದಾರೆ ಎಂಬುದನ್ನ ಪತ್ತೆ ಮಾಡಬೇಕು. ಅವರ ಬಗ್ಗೆ ತನಿಕೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.