ಕಾರು-ಬೈಕ್ ಅಪಘಾತ: ಚಾಲಕರ ಜಗಳ ಬಿಡಿಸಿದ ಶಾಸಕ‌ ಆರಗ ಜ್ಞಾನೇಂದ್ರ - compromised car-bike accident

🎬 Watch Now: Feature Video

thumbnail

By

Published : Jun 22, 2021, 7:10 PM IST

ಶಿವಮೊಗ್ಗ: ಕಾರು ಮತ್ತು ಬೈಕ್ ನಡುವೆ ಸಣ್ಣ ಅಪಘಾತವಾಗಿ ಸವಾರರು ಜಗಳವಾಡುತ್ತಿದ್ದ ವೇಳೆ ಶಾಸಕ ಆರಗ ಜ್ಞಾನೇಂದ್ರ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಿದ್ದಾರೆ. ತೀರ್ಥಹಳ್ಳಿಯ ಕೊಪ್ಪ ವೃತ್ತದಲ್ಲಿ ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿತ್ತು. ಇದರಿಂದ ಚಾಲಕರಿಬ್ಬರು ಪರಸ್ಪರ ಜಗಳವಾಡುತ್ತಿದ್ದರು. ಅದೇ ಮಾರ್ಗವಾಗಿ ಬೈಕ್​ನಲ್ಲಿ ಹೋಗುತ್ತಿದ್ದ ಶಾಸಕ ಆರಗ ಜ್ಞಾನೇಂದ್ರ, ಜನ ನಿಂತಿರುವುದನ್ನು ನೋಡಿ ಸ್ಥಳಕ್ಕೆ ತೆರಳಿದ್ದಾರೆ. ಈ ವೇಳೆ ಜಗಳವಾಡುತ್ತಿದ್ದವರಿಗೆ ತಿಳಿ ಹೇಳಿ ಅಲ್ಲಿಂದ ಕಳುಹಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.