thumbnail

By

Published : Feb 9, 2021, 4:51 PM IST

ETV Bharat / Videos

ನಾಯಕ ಸಮಾಜದ ಮೀಸಲಾತಿ ಬೇಡಿಕೆ ಬಗ್ಗೆ ಸಚಿವ ರಮೇಶ್ ಜಾರಕಿಹೊಳಿ ಮಾತು

ದಾವಣಗೆರೆ: ಶೇ 7.5 ಎಸ್​ಟಿ ಮೀಸಲಾತಿಯು ನಾಯಕ ಸಮಾಜದ ಬಹುವರ್ಷಗಳ ಬೇಡಿಕೆಯಾಗಿದ್ದು, ಇಲ್ಲಿ ತನಕ ಸರ್ಕಾರ ಮೀಸಲಾತಿ ನೀಡಿಲ್ಲ. ಆದರೆ ಇಂದು ನಡೆಯಲರುವ ವಾಲ್ಮೀಕಿ ಜಾತ್ರೆಯಲ್ಲಿ ಸಿಎಂ ಯಡಿಯೂರಪ್ಪ ಈ ಮೀಸಲಾತಿ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ನಾಯಕ ಸಮಾಜ ಕಾದು ಕೂತಿದೆ. 2001ರ ಜನಗಣತಿಯ ಪ್ರಕಾರ ಮೊದಲು 7.5 ಎಸ್​ಟಿ ಮೀಸಲಾತಿ ಸಿಗಲಿ. ಬಳಿಕ 2021 ಜನಗಣತಿ ಪ್ರಕಾರ 9.5ರಷ್ಟು ಮೀಸಲಾತಿ ಪಡೆಯಲು ಹೋರಾಟ ಮಾಡುತ್ತೇವೆ ಎಂದು ಶ್ರೀ ಪ್ರಸನ್ನಾನಂದ ಶ್ರೀಯವರು ಹೇಳಿಕೆ ನೀಡಿದ್ದರು. ಇನ್ನು ಮೀಸಲಾತಿ ಹೆಚ್ಚಿಸುವ ಪ್ರಕ್ರಿಯೆಗೆ ನಾಗಮೋಹನ್ ದಾಸ್​ ವರದಿ ಕೂಡ ಸಿದ್ಧವಾಗಿದ್ದು, ಅದನ್ನು ಸಮಿತಿ ಮುಂದೆ ಮಂಡಿಸಬೇಕಾಗಿದೆ. ಈ ಬಗ್ಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯರು ಮಾತನಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.