thumbnail

By

Published : Dec 29, 2020, 8:45 AM IST

Updated : Dec 29, 2020, 5:28 PM IST

ETV Bharat / Videos

ರಾತ್ರಿ 12.45ರ ಸುಮಾರಿಗೆ ನೆಟ್​ವರ್ಕ್​ ಮೂಲಕ ಪೊಲೀಸರು ಪತ್ತೆ ಹಚ್ಚಿದ್ರು : ಸಿ ಟಿ ರವಿ

ಚಿಕ್ಕಮಗಳೂರು : ವಿಧಾನಪರಿಷತ್‌ ಉಪಸಭಾಪತಿ ಎಸ್‌ ಎಲ್‌ ಧರ್ಮೇಗೌಡ(65) ಅವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತಂತೆ ಪ್ರತಿಕ್ರಿಸಿದ ಮಾಜಿ ಸಚಿವ ಸಿ ಟಿ ರವಿ ಅವರು, ಧರ್ಮೇಗೌಡರು ಖಾಸಗಿ ಕಾರಿನಲ್ಲಿ ಬಂದಿದ್ದರು. ಸುಮಾರು ನಾಲ್ಕು ಗಂಟೆಯಿಂದ ಇಲ್ಲೇ ಸುತ್ತಾಡಿದ್ದಾರೆ. ಆಮೇಲೆ ಅಂದ್ರೆ ಸಂಜೆ 6 ಗಂಟೆಗೆ ಆಗಮಿಸಿದ ರೈಲಿಗೆ ತಲೆ ಕೊಟ್ಟಿದ್ದಾರೆ. ಧರ್ಮೇಗೌಡ ಕುಟುಂಬಸ್ಥರಿಗೆ ರಾತ್ರಿ 12.45ರ ಸುಮಾರಿಗೆ ಪೊಲೀಸರು ನೆಟ್​ವರ್ಕ್​ ಮೂಲಕ ಪತ್ತೆ ಹಚ್ಚಿದಾಗ ಆತ್ಮಹತ್ಯೆ ವಿಷಯ ಗೊತ್ತಾಗಿದೆ. ವಿಧಾನಪರಿಷತ್​ನಲ್ಲಿ ಗಲಾಟೆಯಾದ ಸಂದರ್ಭದಲ್ಲಿ ನಾನು ತಮಿಳುನಾಡಿನಲ್ಲಿದ್ದೆ. ಬಳಿಕ ಆ ಘಟನೆ ಬಗ್ಗೆ ಧರ್ಮೇಗೌಡರ ಬಳಿ ಮಾತನಾಡಿದಾಗ ಅವರು ಯಾವುದೇ ರೀತಿಯ ಬೇಸರ ವ್ಯಕ್ತಪಡಿಸಲಿಲ್ಲ. ಆದ್ರೆ, ಈ ವಿಷಯ ಯಾಕೆ ಅಷ್ಟು ಮನಸ್ಸಿಗೆ ಹಚ್ಕೊಂಡ್ರೋ ಎಂಬುದು ಗೊತ್ತಾಗಿಲ್ಲ. ನಿರೀಕ್ಷೆ ಮಾಡದಂತಹ ಘಟನೆ ಆಗಿದೆ ಎಂದು ಸಿಟಿ ರವಿ ಹೇಳಿದರು.
Last Updated : Dec 29, 2020, 5:28 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.