ಪೌರತ್ವ ತಿದ್ದುಪಡಿ ಖಾಯ್ದೆ ವಿರೋಧಿಸಿ ಮತ್ತಹಿದ ಮಹಾಝ್ ಪ್ರತಿಭಟನೆ
ಶಿವಮೊಗ್ಗ:ಪೌರತ್ವ ತಿದ್ದುಪಡಿ ಖಾಯ್ದೆ ವಿರೋಧಿಸಿ ಮುತ್ತಹಿದ ಮಹಾಝ್ ಸಂಘಟನೆಯ ವತಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕರಿಸಿರುವ ಪೌರತ್ವ ಮಸೂದೆ ಸಂವಿಧಾನದ ಆಶಯದ ವಿರುದ್ದವಾಗಿದೆ. ಈ ಮಸೂದೆಯು ನಮ್ಮ ದೇಶದ ನೈತಿಕ, ಸಂವಿಧಾನಿಕ ಜಾತ್ಯಾತೀತ ಪರಂಪರೆಗಳಿಗೆ ವಿರುದ್ದವಾಗಿದೆ. ಸ್ವತಂತ್ರ ಬಂದ ನಂತರ ಹಿಂದೂ-ಮುಸ್ಲಿಂ ಎನ್ನದೇ ಅಣ್ಣ ತಮ್ಮಂದಿರಂತೆ ಬದುಕುತ್ತಿದ್ದೇ ಆದರೆ ಇಂದು ಪ್ರಧಾನಿ ಮೋದಿ ಹಾಗೂ ಅಮೀತ್ ಷಾ ಸೇರಿ ದೇಶದಲ್ಲಿ ಅಶಾಂತಿ ಉಂಟುಮಾಡುತ್ತಿದ್ದಾರೆ. ಅಂದು ಜಿನ್ನಾ ದೇಶದ ವಿಭಜನೆ ಮಾಡಿದಂತೆ ಇಂದು ಮೋದಿಯವರು ಮಾಡಲು ಹೊರಟಿದ್ದಾರೆ. ಕೋಮು ಧೃವೀಕರಣ ಮಾಡಿ ರಾಜಕೀಯ ಲಾಭ ಪಡೆಯಲು ವ್ಯವಸ್ಥಿತ ಸಂಚಾಗಿದೆ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.