thumbnail

ಮಲ್ಲಿಕಾರ್ಜುನ ಮನ್ಸೂರ್​ ಪುಣ್ಯಸ್ಮರಣೆ: ಸಮಾಧಿಗೆ ಜಿಲ್ಲಾಧಿಕಾರಿ ಪೂಜೆ

By

Published : Sep 12, 2019, 1:23 PM IST

ಧಾರವಾಡ:ಹಿಂದೂಸ್ತಾನಿ ಸಂಗೀತ ರತ್ನ ದಿ. ಡಾ. ಮಲ್ಲಿಕಾರ್ಜುನ ಮನ್ಸೂರ್​ ಅವರ 27ನೇ ಪುಣ್ಯಸ್ಮರಣೆ ನಿಮಿತ್ತ, ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಮನ್ಸೂರ್​ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿ, ಡಾ. ಮಲ್ಲಿಕಾರ್ಜುನ ಮನ್ಸೂರ್​ ಅವರ ಪುಣ್ಯಸ್ಮರಣೆ ನಿಮಿತ್ತ, ಪ್ರತಿ ವರ್ಷ ಆಯೋಜಿಸಲಾಗುತ್ತಿದ್ದ ಸಂಗೀತೋತ್ಸವವನ್ನು ಜಿಲ್ಲೆಯ ನೆರೆ ಹಾವಳಿಯಿಂದಾಗಿ ಮುಂದೂಡಲಾಗಿದೆ. ಟ್ರಸ್ಟ್ ಸದಸ್ಯರ ಆಶಯದಂತೆ ಸಂಗೀತೋತ್ಸವವನ್ನು ಮುಂದಿನ ವರ್ಷ ಮತ್ತೆ ಮುಂದುವರಿಸಲಾಗುವುದು ಎಂದು ತಿಳಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.