ನೆರೆ ಸಂತ್ರಸ್ತರಿಗೆ ಮದರಸಾದಲ್ಲೇ ಆಶ್ರಯ... ಭಾವೈಕ್ಯತೆ ಮೆರೆದ ಇಹ್ಯಾಉಲ್ ಜಮಾತ್ ಕಮೀಟಿ - ಮದರಸಾ ಇಹ್ಯಾಉಲ್ ಜಮಾತ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4225158-thumbnail-3x2-bgk.jpg)
ಬಾಗಲಕೋಟೆ: ಜಿಲ್ಲೆಯ ಮದರಸಾ ಇಹ್ಯಾಉಲ್ ಜಮಾತ್ ಕಮೀಟಿಯು ಹಿಂದೂ,ಮುಸ್ಲಿಂ ಎಂಬ ಬೇಧ-ಭಾವ ಮಾಡದೆ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಿದೆ. ಈ ಮೂಲಕ ನಾವೆಲ್ಲರೂ ಒಂದೇ ಎಂಬುದನ್ನು ಸಾರುವ ಜೊತೆಗೆ ಮಾನವೀಯತೆ ಮೆರೆದಿದ್ದಾರೆ. ಕೃಷ್ಣಾ ನದಿ ಪ್ರವಾಹದಿಂದ ತಮದಡ್ಡಿ, ಶೇಗುಣಸಿ, ಹಳಿಂಗಳಿ ಸೇರಿದಂತೆ ತೊಂದರೆಗೀಡಾದ ಗ್ರಾಮಗಳ ಸಂತ್ರಸ್ತರಿಗೆ ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿರುವ ಈ ಮದರಸಾ ಸಹಾಯ ಮಾಡಿದೆ. ದಿನನಿತ್ಯ ಬಳಕೆಗೆ ಅಗತ್ಯ ಇರುವ ಸಾಮಗ್ರಿಗಳು,ಅಡುಗೆ ಪದಾರ್ಥಗಳು ಸೇರಿದಂತೆ ವಿವಿಧ ಅಗತ್ಯ ವಸ್ತುಗಳ ಕಿಟ್ ವಿತರಣೆ ಮಾಡುವುದರ ಜೊತೆಗೆ ಮದರಸಾದಲ್ಲಿ ಆಶ್ರಯ ಕೂಡ ನೀಡಿ ಭಾವೈಕ್ಯತೆ ಮೆರೆದಿದ್ದಾರೆ.