thumbnail

By

Published : Feb 6, 2020, 9:17 AM IST

Updated : Feb 6, 2020, 9:27 AM IST

ETV Bharat / Videos

ನಗರಾಭಿವೃದ್ಧಿ ಖಾತೆ ಕೊಟ್ಟರೆ ತುಂಬಾ ಸಂತೋಷ : ಭೈರತಿ ಬಸವರಾಜ್

ಕೊಟ್ಟ ಮಾತಿನಂತೆ ಯಡಿಯೂರಪ್ಪ ನಡೆದುಕೊಂಡಿದ್ದಾರೆ ಎಂದು ಭಾವಿ‌ ಸಚಿವ ಭೈರತಿ ಬಸವರಾಜ್ ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ ಮೊದಲ ಬಾರಿಗೆ ಸಚಿವರಾಗುತ್ತಿರುವ ಭೈರತಿ ಬಸವರಾಜ್​ ಅವರ ಮನೆಯಲ್ಲಿ‌ ಸಂಭ್ರಮ ಮನೆಮಾಡಿದೆ. ನಗರಾಭಿವೃದ್ಧಿ ಖಾತೆ ಕೊಟ್ಟರೆ ತುಂಬಾ ಸಂತೋಷ. ಯಾವುದೇ ಖಾತೆ ಕೊಟ್ಟರೂ ನಿಭಾಯಿಸುವೆ ಎಂದರು. ಬೆಂಗಳೂರಿನ ಅಭಿವೃದ್ಧಿ ಬಗ್ಗೆ ವಿಶೇಷ ಒಲವು ವ್ಯಕ್ತಪಡಿಸುವ ಮೂಲಕ ಮತ್ತೊಮ್ಮೆ ನಗರಾಭಿವೃದ್ಧಿ ಖಾತೆ ಬಗ್ಗೆ ಇಚ್ಛೆ ವ್ಯಕ್ತಪಡಿಸಿದ ಅವರು, ಭೈರತಿ ಗ್ರಾಮ‌ ಹಾಗೂ ಕೆ.ಆರ್.ಪುರ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಿದರು. ನಂತರ  ಪುತ್ರ ನೀರಜ್​​ನೊಂದಿಗೆ ಅಯ್ಯಪ್ಪ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಕುಟುಂಬ ಸಮೇತರಾಗಿ ರಾಜಭವನದತ್ತ ಹೊರಟಿದ್ದಾರೆ.
Last Updated : Feb 6, 2020, 9:27 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.