ಕರ್ನಾಟಕ ಬಂದ್ : ಕೆಆರ್ ಮಾರ್ಕೆಟ್ನಲ್ಲಿ ಸಹಜ ಸ್ಥಿತಿ.. ಪೊಲೀಸ್ ಕಣ್ಗಾವಲು
![ETV Thumbnail thumbnail](https://etvbharatimages.akamaized.net/etvbharat/prod-images/320-214-9769206-thumbnail-3x2-bng.jpg)
ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಕರ್ನಾಟಕ ಬಂದ್ಗೆ ಕರೆ ನೀಡಿರುವ ಹಿನ್ನೆಲೆ ಪೊಲೀಸ್ ಇಲಾಖೆಯಿಂದ ಕಠಿಣ ನಿಯಮಗಳನ್ನ ಹೊರಡಿಸಲಾಗಿದೆ. ಸದ್ಯ ಕೆ ಆರ್ ಮಾರ್ಕೆಟ್ ಬಳಿ ಪ್ರತಿ ದಿನದಂತೆ ವ್ಯಾಪಾರ, ವಹಿವಾಟು ಆರಂಭವಾಗಿದೆ. ಕನ್ನಡ ಪರ ಸಂಘಟನೆಯವರು ಬಲವಂತವಾಗಿ ಬಂದ್ ನಡೆಸಲು ಅವಕಾಶವಿಲ್ಲ. ಹೀಗಾಗಿ ಮುಂಜಾನೆ ವ್ಯಾಪಾರ, ವಹಿವಾಟುಗಳಿಗೆ ತೊಂದರೆಯಾಗಬಹುದೆಂದು ಮಾರುಕಟ್ಟೆ ಸುತ್ತ ಖಾಕಿ ಸರ್ಪಗಾವಲು ಹಾಕಲಾಗಿದೆ.