thumbnail

ಶಕ್ತಿ ದೇವತೆ ಶ್ರೀ ಹಾಸನಾಂಬ ದೇವಿಯ ಜಾತ್ರೆ ಪ್ರಾರಂಭ: ವಿದ್ಯುಕ್ತ ಚಾಲನೆ

By

Published : Oct 17, 2019, 11:08 PM IST

ಹಾಸನ : ಶಕ್ತಿ ದೇವತೆ ಶ್ರೀ ಹಾಸನಾಂಬ ದೇವಿಯ ದೇವಸ್ಥಾನದ ಬಾಗಿಲು ಇಂದು ತೆರೆಯಲಾಗಿದ್ದು, ಈ ತಿಂಗಳು 29 ರ ವರೆಗೂ ರಾಜ್ಯದ ಮತ್ತು ಹೊರರಾಜ್ಯದಿಂದ ಬರುವ ಎಲ್ಲಾ ಭಕ್ತಾಧಿಗಳಿಗೂ ಹಾಸನಾಂಬ ದೇವಿ ದರ್ಶನ ಮುಕ್ತವಾಗಿ ಮಾಡಲು ವ್ಯವಸ್ಥಿತವಾದ ಅವಕಾಶ ಕಲ್ಪಿಸಲಾಗಿದೆ ಎಂದು ಶಾಸಕ ಪ್ರೀತಮ್ ಜೆ. ಗೌಡ ತಿಳಿಸಿದರು. ಗರ್ಭಗುಡಿ ಬಾಗಿಲು ತೆಗೆದಾಗ ಬಾಡದ ಹೂವು, ಆರದ ದೀಪ ನೋಡಿ ಕಣ್ತುಂಬಿಕೊಂಡಿದ್ದೇನೆ. ದೇವಿಯ ಮಹಾತ್ಮ ಅಪಾರವಾಗಿದೆ. ಹಾಸನಾಂಬ ದೇವಿ ದರ್ಶನದ ಜಾತ್ರಾ ಮಹೋತ್ಸವಕ್ಕೆ ಎಲ್ಲಾ ಸಚಿವರು ಹಾಗೂ ಮಾಜಿ ಮಂತ್ರಿಗಳಿಗೂ ಆಹ್ವಾನ ನೀಡಲಾಗಿದೆ ಎಂದು ಹೇಳಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.