ಕಾರವಾರದಲ್ಲಿ ತೌಕ್ತೆ ಅಬ್ಬರ: ರವೀಂದ್ರನಾಥ್ ಟ್ಯಾಗೋರ್ ಕಡಲ ತೀರದಿಂದ ಗ್ರೌಂಡ್ ರಿಪೋರ್ಟ್ - ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರ
🎬 Watch Now: Feature Video

ಕಾರವಾರ (ಉತ್ತರ ಕನ್ನಡ): ಕರಾವಳಿಯಲ್ಲಿ ತೌಕ್ತೆ ಚಂಡಮಾರುತದಿಂದಾಗಿ ಕಡಲಬ್ಬರ ಜೋರಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಅನಾಹುತ ಸೃಷ್ಟಿಸಿದೆ. ಎರಡು ದಿನದಿಂದ ಸಮುದ್ರದಲ್ಲಿ ಭಾರಿ ಪ್ರಮಾಣದ ಅಲೆಗಳೂ ಏಳುತ್ತಿದ್ದು, ಕಡಲ ತೀರದ ಬಳಿ ಆತಂಕ ಸೃಷ್ಟಿಸಿವೆ. ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲ ತೀರದ ಬಳಿಯೂ ಆಳೆತ್ತರದ ಅಲೆಗಳು ದಡಕ್ಕೆ ಬಂದು ಅಪ್ಪಳಿಸುತ್ತಿವೆ. ಅಲ್ಲದೆ ಮೀನುಗಾರರು ಹಾಗೂ ಸಾರ್ವಜನಿಕರಿಗೆ ಸಮುದ್ರದ ಬಳಿ ಬರದಂತೆ ಸೂಚಿಸಲಾಗಿದ್ದು, ಈ ಕುರಿತ ಗ್ರೌಂಡ್ ರಿಪೋರ್ಟ್ ಇಲ್ಲಿದೆ.