ಗುಂಪಿನಲ್ಲಿ ಓಡಿ ಬಂದ ಕಾಡುಕೋಣದ ಮರಿಯೊಂದು ಸುಳ್ಯ ತಾಲೂಕಿನ ಗುತ್ತಿಗಾರು ಸಮೀಪದ ವಳಲಂಬೆ ಶ್ರೀ ಮಹಾವಿಷ್ಣು ದೇವಸ್ಥಾನ ಬಳಿ ಇರುವ ಪುಷ್ಕರಣಿಗೆ ಬಿದ್ದ ಘಟನೆ ನಡೆದಿದೆ. ತಡರಾತ್ರಿ ಕೆರೆಗೆ ಬಿದ್ದಿದ್ದು ಮುಂಜಾನೆ ಗಮನಕ್ಕೆ ಬಂದಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಕಾಡುಕೋಣ ರಕ್ಷಣೆಗೆ ಮುಂದಾಗಿದ್ದಾರೆ.