thumbnail

By

Published : May 19, 2021, 5:10 PM IST

ETV Bharat / Videos

ಲಾಕ್​ಡೌನ್ ತಂದಿಟ್ಟ​ ಸಂಕಷ್ಟ.. ಸೇವಂತಿಗೆಗೆ ಸೂಕ್ತ ಬೆಲೆ ಸಿಗದೆ ರೈತನಿಂದ ಬೆಳೆ ನಾಶ

ಹಾವೇರಿ: ತಾಲೂಕಿನ ನಾಗನೂರಿನಲ್ಲಿ ರೈತನೊಬ್ಬ ಸೂಕ್ತ ಬೆಲೆ ಸಿಗದೆ ಸೇವಂತಿ ಬೆಳೆ ನಾಶ ಮಾಡಿದ್ದಾನೆ. ಹೊಳೆಯಪ್ಪ ಸಂಗಾಪುರ ಎಂಬ ರೈತ ಒಂದು ಎಕರೆಯಲ್ಲಿ ಸೇವಂತಿ ಬೆಳೆದಿದ್ದ. ಲಾಕ್​ಡೌನ್​ ಎಫೆಕ್ಟ್​ನಿಂದ ಕೊಳ್ಳುವವರಿಲ್ಲದೇ ಟ್ರ್ಯಾಕ್ಟರ್‌ನಿಂದ ಸೇವಂತಿಗೆಯನ್ನು ನೆಲಸಮ ಮಾಡಿದ್ದಾನೆ. ಒಂದು ಎಕರೆ ಸೇವಂತಿ ಬೆಳೆಯಲು 30 ಸಾವಿರಕ್ಕೂ ಅಧಿಕ ಹಣ ಖರ್ಚು ಮಾಡಿದ್ದಾನೆ. ಆದರೆ ಸೇವಂತಿಗೆ ಸರಿಯಾದ ಬೆಲೆ ಮತ್ತು ಮಾರುಕಟ್ಟೆ ಸಿಗದಿರುವುದರಿಂದ ರೈತ ಕಂಗೆಟ್ಟು ಈ ನಿರ್ಧಾರ ಕೈಗೊಂಡಿದ್ದಾನೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.