ಮಳೆ ಪರಿಹಾರದ ಚೆಕ್ ಪಡೆದು ದಲ್ಲಾಳಿಗಳ ಮೊರೆ ಹೋದ ಸಿಲಿಕಾನ್ ಸಿಟಿ ಸಂತ್ರಸ್ತರು - ಮಳೆ ಪರಿಹಾರದ ಚೆಕ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9316793-thumbnail-3x2-vicky.jpg)
ಬೆಂಗಳೂರು: ರಾಜಧಾನಿಯಲ್ಲಿ ಮೂರು ದಿನದ ಹಿಂದೆ ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಮಳೆಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಈಗಾಗಲೇ ಚೆಕ್ ವಿತರಿಸಲಾಗಿದೆ. ಸಂತ್ರಸ್ತರು ಈ ಚೆಕ್ ಅನ್ನು ಬ್ಯಾಂಕಿಗೆ ಹಾಕುವ ಬದಲು ದಲ್ಲಾಳಿಗಳಿಗೆ ನೀಡಿದ್ದಾರೆ. ಹೊಸಕೆರೆ ಹಳ್ಳಿಯಲ್ಲಿ ಮಳೆರಾಯ ಅವಾಂತರ ಸೃಷ್ಟಿಸಿದ ಹಿನ್ನೆಲೆ ಸರ್ಕಾರ ಪರಿಹಾರ ಚೆಕ್ ವಿತರಣೆ ಮಾಡಿದ್ದು, ಹಬ್ಬದ ಪ್ರಯುಕ್ತ ಬ್ಯಾಂಕ್ ರಜೆ ಇರುವ ಕಾರಣ ಇದೀಗ ಅದೇ ಜಾಗಕ್ಕೆ ದಲ್ಲಾಳಿಗಳು ಎಂಟ್ರಿ ಕೊಟ್ಟಿದ್ದಾರೆ. ಪ್ರತೀ ಚೆಕ್ಗೆ 500 ರಿಂದ 1000ರೂ ಕಮೀಷನ್ ಪಡೆದು ಹಣ ನೀಡುತ್ತಿದ್ದಾರೆ. ಸಂತ್ರಸ್ತರು ಸಹ ಬ್ಯಾಂಕಿಗೆ ಹೋಗುವ ಬದಲು ದಲ್ಲಾಳಿಗಳ ಮೊರೆ ಹೋಗಿರುವುದು ವಿಪರ್ಯಾಸವಾಗಿದೆ.