'ಗೂಗಲ್'ಗೆ ಅಪ್ಪಳಿಸಿರುವ ಪ್ರವಾಹ... ಮೀನುಗಾರರ ಬದುಕು ಬೀದಿಪಾಲು - ಕೃಷ್ಣ ನದಿ ತೀರ
🎬 Watch Now: Feature Video

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗೂಗಲ್ ಗ್ರಾಮದ ಬಳಿ ಕೃಷ್ಣ ನದಿ ತೀರದಲ್ಲಿ ಮೀನುಗಾರರ ಗುಡಿಸಲುಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಇದರಿಂದ ಗುಡಿಸಲುಗಳಲ್ಲಿದ್ದ ದವಸ-ಧಾನ್ಯಗಳು ಮತ್ತು ಗೃಹ ಉಪಯೋಗಿ ಸಾಮಗ್ರಿಗಳು ನೀರು ಪಾಲಾಗಿವೆ ಹಾಗೂ ಮೀನು ಹಿಡಿಯಲು ಬಳಸುವ ಬಲಿ ಸಹ ಕೊಚ್ಚಿ ಹೋಗಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಈ ಕುರಿತು ನಮ್ಮ ವರದಿಗಾರ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ...