thumbnail

By

Published : Feb 9, 2021, 9:55 AM IST

Updated : Feb 9, 2021, 10:02 AM IST

ETV Bharat / Videos

ಕಿಡಿಗೇಡಿಗಳು ಇಟ್ಟ ಬೆಂಕಿಗೆ 20 ಎಕರೆಯಲ್ಲಿ ಬೆಳೆದಿದ್ದ ಕಡಲೆ ಬೆಳೆಯ ಬಣವೆ ಸಂಪೂರ್ಣ ಭಸ್ಮ

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹೊಸ್ಸುರಿನಲ್ಲಿ ಕಿಡಿಗೇಡಿಗಳು ಕಡಲೆ ಬಣವೆಗೆ ಬೆಂಕಿ ಇಟ್ಟಿರುವ ಘಟನೆ ನಡೆದಿದೆ. 20 ಎಕರೆಯಲ್ಲಿ ಬೆಳೆದ ಕಡಲೆ ಬೆಳೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಹೊಸ್ಸುರು ಗ್ರಾಮದ ಭೀಮಣ್ಣ ಸೀಭಾ ಎಂಬ ರೈತನಿಗೆ ಸೇರಿದ ಬೆಳೆ ಇದಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಕಡಲೆ ಬೆಳೆ ಕಟಾವು ಮಾಡಿ ಶೇಖರಿಸಿಡಲಾಗಿತ್ತು. ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Feb 9, 2021, 10:02 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.