ಹಣಕಾಸು ವಿಚಾರದಲ್ಲಿ ಮನಸ್ತಾಪ: ಚಪ್ಪಲಿಯಿಂದ ಹೊಡೆದಾಡಿಕೊಂಡ ಎರಡು ಕುಟುಂಬಗಳು - ಹಿಗ್ಗಾಮುಗ್ಗ ಥಳಿಸಿ‌ ಮಹಿಳೆಯರು ಆಕ್ರೋಶ

🎬 Watch Now: Feature Video

thumbnail

By

Published : Sep 6, 2020, 11:06 AM IST

ಮೈಸೂರು: ಹಣಕಾಸು ವಿಚಾರದಲ್ಲಿ ಉಂಟಾದ ಮನಸ್ತಾಪದಿಂದ ಎರಡು ಕುಟುಂಬದವರು ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಂಡಿರುವ ಘಟನೆ ಮೈಸೂರು ಹೊರವಲಯದ ಇಂದಿರಾಗಾಂಧಿ ಬಡಾವಣೆಯ ಏಕಲವ್ಯ ನಗರದಲ್ಲಿ‌ ನಡೆದಿದೆ. ಕುಟುಂಬಗಳ ವೈಮನಸ್ಸಿನಿಂದ ಚಿಕ್ಕರಂಗಪ್ಪ (38) ಎಂಬಾತನ ಮೇಲೆ‌ ಮಹಿಳೆಯರೇ ಹಿಗ್ಗಾಮುಗ್ಗಾ ಥಳಿಸಿ‌ದ್ದಾರೆ. ಘಟನೆಯ ವಿಡಿಯೋ ವೈರಲ್​ ಆಗಿದೆ. ಹಲ್ಲೆ ನಡೆಸಿದ ಕುಮಾರ್, ಬಸಪ್ಪ, ಸದಾನಂದ್, ಅಂಬಿಕ, ಎಲ್ಲಮ್ಮ ಇವರ ವಿರುದ್ಧ ಚಿಕ್ಕರಂಗಪ್ಪ ಅವರು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.