29 ವರ್ಷದ ಬೆಳೆ ಪರಿಹಾರಕ್ಕೆ ಕೊಪ್ಪಳ ಜಿಲ್ಲಾಡಳಿತ-ರೈತರ ಮಧ್ಯೆ ಜಟಾಪಟಿ
29 ವರ್ಷಗಳ ಬೆಳೆ ಪರಿಹಾರದ ವಿಚಾರವಾಗಿ ರೈತರು ಹಾಗೂ ಕೊಪ್ಪಳ ಜಿಲ್ಲಾಡಳಿತದ ನಡುವೆ ಜಟಾಪಟಿ ನಡೆಯುತ್ತಿದೆ. ಬೆಳೆ ಪರಿಹಾರ ಕೊಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಅಂತ ರೈತರು ಜಿಲ್ಲಾಡಳಿತದ ಮುಂದೆ ಟೆಂಟ್ ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.