ಹೆಚ್.​ಡಿ. ಕೋಟೆ ತಾಲೂಕಿನಲ್ಲಿ ಕಾಡಾನೆ ದಾಳಿಗೆ ರೈತ ಬಲಿ - ಕಾಡಾನೆ ದಾಳಿಯಿಂದ ರೈತ ಬಲಿ

🎬 Watch Now: Feature Video

thumbnail

By

Published : Nov 29, 2020, 2:06 PM IST

ಮೈಸೂರು: ಜಮೀನಿಗೆ ತೆರಳುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೆಚ್‌.ಡಿ.ಕೋಟೆ ತಾಲೂಕಿನಲ್ಲಿ ನಡೆದಿದೆ. ನೆಮ್ಮನಹಳ್ಳಿ ಗ್ರಾಮದ ಯೋಗೇಶ್ ಆನೆ ದಾಳಿ‌ಗೆ ಬಲಿಯಾಗಿರುವ ರೈತ. ಈತ ಜಮೀನಿನಲ್ಲಿ‌ ಶುಂಠಿ ಬೆಳೆ ನೋಡಲು ತೆರಳುತ್ತಿದ್ದ. ಈ ವೇಳೆ ದಾಳಿ ನಡೆಸಿ ಕಾಡಾನೆ ಆತನನ್ನು ತುಳಿದು ಸಾಯಿಸಿದೆ. ಸ್ಥಳಕ್ಕೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಅರಣ್ಯ ವ್ಯಾಪ್ತಿಯ ಮೊಳೆಯೂರು ಉಪವಲಯ ಪ್ರದೇಶದಲ್ಲಿರುವ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಸ್ಥರ ಸಹಾಯದಿಂದ ಆನೆಯನ್ನು ಕಾಡಿಗಟ್ಟಲು ಕಾರ್ಯಾಚರಣೆ‌ ನಡೆಸುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.