thumbnail

By

Published : Dec 29, 2020, 1:10 PM IST

ETV Bharat / Videos

ಎಸ್‌ ಎಲ್‌ ಧರ್ಮೇಗೌಡ ಆತ್ಮಹತ್ಯೆ ವೈಯಕ್ತಿಕ ವಿಚಾರವೋ, ರಾಜಕಾರಣವೋ ಗೊತ್ತಿಲ್ಲ : ಡಿಕೆಶಿ

ಧರ್ಮೇಗೌಡ ಆತ್ಮಹತ್ಯೆ ನಂಬಲಿಕ್ಕೆ ಸಾಧ್ಯವಿಲ್ಲ. ಯಾವುದಕ್ಕೆ ಧೈರ್ಯ ಕಳೆದುಕೊಂಡ್ರೋ ಅರ್ಥ ಆಗ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಎಸ್​ ಎಲ್​ ಧರ್ಮೇಗೌಡ ಸಾವಿನ ಕುರಿತು ಆಘಾತ ವ್ಯಕ್ತಪಡಿಸಿದರು. ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಧರ್ಮೇಗೌಡ ಅವರು ಬಹಳ ಸೂಕ್ಷ್ಮ ಮನಸ್ಸಿನ ವ್ಯಕ್ತಿ. ಅವರ ತಂದೆ ಕೂಡ ಶಾಸಕರಾಗಿದ್ದರು. ವೈಯಕ್ತಿಕ ವಿಚಾರವೋ, ರಾಜಕಾರಣವೋ ಗೊತ್ತಿಲ್ಲ. ಡೆತ್​​ ನೋಟ್‌ ಸಾರಾಂಶ ಇನ್ನೂ ತಿಳಿದಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಂಬನಿ ಮಿಡಿದರು. ರಾಜಕೀಯ ಕಾರಣಕ್ಕೆ ಆತ್ಮಹತ್ಯೆ ಮಾಡಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ನಾನು ಕಮೆಂಟ್ ಮಾಡಲ್ಲ. ಅವರ ನೋವಲ್ಲಿ ಅವರಿದ್ದಾರೆ‌, ಸಹಜವಾಗಿ ಆ ಪಕ್ಷಕ್ಕೆ ಆಘಾತವಾಗಿರುತ್ತದೆ ಎಂದು ತಿಳಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.