ಧ್ವಜಾರೋಹಣಕ್ಕೂ ತಡವಾಗಿ ಬಂದ ದಿನೇಶ್: ವಿಳಂಬಕ್ಕೆ ಕೈ ನಾಯಕರ ಬೇಸರ
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ದಿನದಿಂದಲೂ ಕಚೇರಿಯತ್ತ ಬರುವುದನ್ನು ಬಹುತೇಕ ನಿಲ್ಲಿಸಿರುವ ದಿನೇಶ್ ಗುಂಡೂರಾವ್ ಇಂದು ಕೂಡ ಅದೇ ಸಂಪ್ರದಾಯವನ್ನು ಮುಂದುವರಿಸಿದ್ದಾರೆ. ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಬೇಕಿದ್ದವರು ಸಾಕಷ್ಟು ವಿಳಂಬವಾಗಿ ಆಗಮಿಸಿ ಹಿರಿಯ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.