thumbnail

By

Published : Apr 12, 2021, 1:34 PM IST

ETV Bharat / Videos

ಯುಗಾದಿ ಅಮಾವಾಸ್ಯೆಯಂದು ಹಂಪಿ ವಿರೂಪಾಕ್ಷೇಶ್ವರನ ‌ದರ್ಶನ ಪಡೆದ ಭಕ್ತರು

ಹೊಸಪೇಟೆ: ಯುಗಾದಿ ಅಮಾವಾಸ್ಯೆಯಾದ ಹಿನ್ನೆಲೆ ಇಂದು ಹಂಪಿ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಜೊತೆಗೆ ಪಂಪಾಂಬಿಕೆ ಹಾಗೂ ಭುವನೇಶ್ವರಿ ದೇವಿಯ ವಿಗ್ರಹಕ್ಕೂ ಕೂಡ ಪೂಜೆ‌ ಸಲ್ಲಿಸಲಾಯಿತು. ನಾನಾ ಹೂಗಳಿಂದ ದೇವರನ್ನು ಅಲಂಕರಿಸಿದ್ದು, ಭಕ್ತರು ತುಂಗಭದ್ರಾ ನದಿಯಲ್ಲಿ ಸ್ನಾನ‌‌ ಮಾಡಿ, ಬಳಿಕ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ‌ ಪಡೆದರು. ಜಿಲ್ಲೆ ಮಾತ್ರವಲ್ಲದೆ, ರಾಯಚೂರು, ಕೊಪ್ಪಳ, ಬಳ್ಳಾರಿ, ಆಂಧ್ರಪ್ರದೇಶ ಹಾಗೂ ತೆಲಂಗಾಣದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.