ಕೊರೊನಾಗೆ ವೃದ್ಧ ಬಲಿ: ಯಾದಗಿರಿಯಿಂದ ಕಲಬುರಗಿಗೆ ಹೋಗುವ ಬಸ್​​ಗಳು ಖಾಲಿ ಖಾಲಿ

By

Published : Mar 13, 2020, 4:03 PM IST

thumbnail
ಯಾದಗಿರಿ: ನೆರೆಯ ಜಿಲ್ಲೆ ಕಲಬುರಗಿಯಲ್ಲಿ ಕೊರೊನಾ ವೈರಸ್​ನಿಂದ ವೃದ್ಧ ಮೃತಪಟ್ಟ ಹಿನ್ನೆಲೆಯಲ್ಲಿ ಯಾದಗಿರಿಯಲ್ಲೂ ಸಹ ಜನ ಭೀತಿಯಲ್ಲಿದ್ದಾರೆ. ಪ್ರಯಾಣಿಕರು ಯಾದಗಿರಿಯಿಂದ ಕಲಬುರಗಿಗೆ ಪ್ರಯಾಣ ಬೆಳೆಸಲು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಯಾದಗಿರಿಯಿಂದ ಕಲಬುರಗಿಗೆ ತೆರಳುವ ಬಸ್​ಗಳು ಪ್ರಯಾಣಿಕರಿಲ್ಲದೆ ಖಾಲಿ ಖಾಲಿಯಾಗಿ ಹೊರಡುತ್ತಿವೆ. ನಿತ್ಯ ಯಾದಗಿರಿಯಿಂದ ಕಲಬುರಗಿಗೆ 5-6 ಬಸ್​ಗಳು ತೆರಳುತ್ತವೆ. ಆದರೆ ಇದೀಗ ಮಾರಣಾಂತಿಕ ವೈರಸ್ ಕಲಬುರಗಿಗೂ ವಕ್ಕರಿಸಿದ್ದರಿಂದ ಕೆಎಸ್​​ಆರ್​ಟಿಸಿ ಬಸ್​ಗಳು ಪ್ರಯಾಣಿಕರಿಲ್ಲದೆ ಭಣಗುಡುತ್ತಿವೆ. ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದ್ದು, ಸಾರಿಗೆ ಇಲಾಖೆ ನಷ್ಟ ಅನುಭವಿಸುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.