ಡಿಕೆಶಿ ಆಗಮನ ಹಿನ್ನೆಲೆ: ಪೊಲೀಸರ ಕಣ್ತಪ್ಪಿಸಿ ವಿಮಾನ ನಿಲ್ದಾಣದೊಳಗೆ ಬಂದ ಕೈ ಕಾರ್ಯಕರ್ತರು - ಬೆಂಗಳೂರು ಕೆಐಎಎಲ್ ವಿಮಾನ ನಿಲ್ದಾಣ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4875114-thumbnail-3x2-net.jpg)
ಡಿ.ಕೆ. ಶಿವಕುಮಾರ್ ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೆಐಎಎಲ್ ವಿಮಾನ ನಿಲ್ದಾಣದ ಟರ್ಮಿನಲ್ಗೆ ಕಾರ್ಯಕರ್ತರು, ಬೆಂಬಲಿಗರಿಗೆ ನಿರ್ಬಂಧ ಹೇರಲಾಗಿತ್ತು. ಸಾವಿರಾರು ಕೈ ಕಾರ್ಯಕರ್ತರು ಹಾಗೂ ಬೆಂಬಲಿಗರು ಬರುವ ನಿರೀಕ್ಷೆಯಿಂದ ವಿಮಾನ ನಿಲ್ದಾಣದ 3 ರಸ್ತೆಗಳಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದರು. ಆದ್ರೂ ಪೋಲಿಸರ ಕಣ್ತಪ್ಪಿಸಿ ಒಳನುಗ್ಗಿರುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಡಿಕೆಶಿ ಅಭಿಮಾನಿಗಳು ಪೋಸ್ಟರ್ ಹಿಡಿದು ಟರ್ಮಿನಲ್ನಲ್ಲೇ ಸ್ವಾಗತ ಕೋರಲು ನಿಂತಿದ್ದಾರೆ.