ಕೊರೊನಾ ನಿವಾರಣೆಗೆ ಆರಾಳ ಗ್ರಾಮದಲ್ಲಿ ಚಂಡಿಕಾಯಾಗ.. - ಶ್ರೀ ರುದ್ರಸ್ವಾಮಿ ದೇವಸ್ಥಾನ
🎬 Watch Now: Feature Video

ಕೊಪ್ಪಳ : ಕೊರೊನಾ ವೈರಸ್ ಸಂಹಾರ ಹಾಗೂ ಲೋಕ ಕಲ್ಯಾಣಾರ್ಥ ಗಂಗಾವತಿ ತಾಲೂಕಿನ ಆರಾಳ ಗ್ರಾಮದ ಶ್ರೀ ರುದ್ರಸ್ವಾಮಿ ದೇವಸ್ಥಾನದಲ್ಲಿ ಚಂಡಿಯಾಗ ಹೋಮ ಮಾಡಲಾಗಿದೆ. ಹರಿಯಾಣದ ನಾಗಾ ಸಾಧುಗಳಿಂದ ವಿಶೇಷ ಪೂಜೆ ನಡೆಯಿತು. ಚಂಡಿಯಾಗದಲ್ಲಿ ಸುಳೇಕಲ್ ಬೃಹನ್ಮಠದ ಪದ್ಮಾಕ್ಷರಯ್ಯ ಸ್ವಾಮೀಜಿ ಭಾಗಿಯಾಗಿದ್ದರು. ಹೆಚ್ಚುತ್ತಿರುವ ಕೊರೊನಾ ಸೋಂಕು ನಿವಾರಣೆಯಾಗಲಿ ಎಂದು ಸಂಕಲ್ಪ ಮಾಡಿ ಯಾಗ ನಡೆಸಲಾಗಿದೆ.