ಕೆಲವರನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈ ಬಿಡುವುದು ಸುಲಭವಿಲ್ಲ: ಸಂಸದ ಉಮೇಶ್​ ಜಾಧವ್

By

Published : Nov 29, 2020, 12:12 PM IST

Updated : Nov 29, 2020, 12:32 PM IST

thumbnail
ಲಿಂಗಸುಗೂರು: ಬಂಜಾರ, ಭೋವಿ ಸೇರಿದಂತೆ ಇತರೆ ಜಾತಿಯವರನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವುದು ಸುಲಭವಿಲ್ಲ ಎಂದು ಸಂಸದ ಡಾ. ಉಮೇಶ್​ ಜಾಧವ್​​ ತಿಳಿಸಿದರು. ಲಿಂಗಸೂಗೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಈ ಕುರಿತು ಸುಪ್ರೀಂ ಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ತಿರಸ್ಕೃತಗೊಳಿಸಿ ಆಯೋಗದ ಮುಂದೆ ಹೋಗಲು ಕೋರ್ಟ್​​ ಸೂಚಿಸಿದೆ. ಇಲ್ಲ ಸಲ್ಲದ ಊಹಾಪೋಹಗಳಿಗೆ ಭಯಪಡುವ ಅವಶ್ಯಕತೆ ಇಲ್ಲ ಎಂದರು. ದೇಶದಲ್ಲಿ ಮೀಸಲಾತಿ ಎಲ್ಲಿಯವರೆಗೆ ಮುಂದುವರೆಯುತ್ತದೆಯೋ ಅಲ್ಲಿಯವರೆಗೆ ನಾವುಗಳು ಪರಿಶಿಷ್ಟ ಜಾತಿ ಮೀಸಲಾತಿ ಪಟ್ಟಿಯಲ್ಲಿರುವುದು ಖಚಿತ ಎಂದರು.
Last Updated : Nov 29, 2020, 12:32 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.