ಸಿಗರೇಟ್ ಇಲ್ಲಾ ಎಂದಿದ್ದಕ್ಕೆ ಹಾಲಿನ ವ್ಯಾಪಾರಿ ಮೇಲೆ ಹಲ್ಲೆ; ಸಿಸಿಟಿವಿಯಲ್ಲಿ ಕೃತ್ಯ ಸೆರೆ

By

Published : Sep 28, 2022, 8:09 AM IST

Updated : Feb 3, 2023, 8:28 PM IST

thumbnail

ಹೊಸಕೋಟೆ: ಅಂಗಡಿಯಲ್ಲಿ ಸಿಗರೇಟ್ ಕೊಟ್ಟಿಲ್ಲ ಎಂದು ಕಿಡಿಗೇಡಿಯೊಬ್ಬ ಹಾಲಿನ ವ್ಯಾಪಾರಿ ಮೇಲೆ ಹಲ್ಲೆ ಮಾಡಿರುವ ಪ್ರಕರಣ ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ ನಡೆದಿದೆ. ಹಾಲು ವ್ಯಾಪಾರಿ ಪ್ರದೀಪ್​ ಹಲ್ಲೆಗೊಳಗಾದವರು. ಕಳೆದ ವಾರ ಅಭಿಲಾಷ್​ ಮತ್ತು ಆತನ ಸ್ನೇಹಿತರು ಪ್ರದೀಪ್​ ಅವರ ಅಂಗಡಿಯಲ್ಲಿ ಸಿಗರೇಟ್​ ಕೇಳಿದ್ದಾರೆ. ಪ್ರದೀಪ್​ ಸಿಗರೇಟ್​ ಇಲ್ಲಾ ಎಂದಿದ್ದಕ್ಕೆ ಈ ಅಂಗಡಿಯಲ್ಲಿ ಏನು ಸಿಗಲ್ಲ ಎಂದು ಅವರನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಾರೆ. ಇದರಿಂದ ಪ್ರದೀಪ್ ಅವರ ಮೂಗಿಗೆ ಗಾಯವಾಗಿದೆ. ಈ ಕುರಿತು ಸೂಲಿಬೆಲೆ ಪೊಲೀಸ್​ ಠಾಣೆಯಲ್ಲಿ ಪ್ರದೀಪ್​ ಕುಟುಂಬಸ್ಥರು ದೂರು ನೀಡಿದ್ದಾರೆ. ದೂರಿನ ವಿಷಯ ತಿಳಿದ ಅಭಿಲಾಷ್​ ಮತ್ತು ಗ್ಯಾಂಗ್ ಕೇಸ್​ ಹಿಂತೆಗೆದುಕೊಳ್ಳುವಂತೆ ತಮಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪ್ರದೀಪ್​ ಆರೋಪಿಸಿದ್ದಾರೆ.

Last Updated : Feb 3, 2023, 8:28 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.