thumbnail

By

Published : Aug 19, 2022, 11:45 AM IST

Updated : Feb 3, 2023, 8:26 PM IST

ETV Bharat / Videos

ಬೃಂದಾವನ ದೇವಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ..ಹಬ್ಬದ ಶುಭಾಶಯ ತಿಳಿಸಿದ ಪಿಎಂ ಮೋದಿ

ಉತ್ತರ ಪ್ರದೇಶದ ಮಥುರಾದ ಬೃಂದಾವನ ದೇವಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಉತ್ಸಾಹದಿಂದ ಆಚರಿಸುತ್ತಿದ್ದಾರೆ. 'ನಂದ್ ಕೆ ಆನಂದ್ ಭಯೋ ಜೈ ಕನ್ಹಯ್ಯಾ ಲಾಲ್ ಕಿ...' ಎಂದು ಭಕ್ತಾದಿಗಳು ಕೃಷ್ಣನ ಜಪ ಮಾಡುತ್ತಿದ್ದಾರೆ. ನಿನ್ನೆ ಮಧ್ಯರಾತ್ರಿಯಿಂದಲೇ ಶ್ರೀಕೃಷ್ಣನ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಉತ್ತರಪ್ರದೇಶ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲು ಇಂದು ಸಂಜೆ ಮಥುರಾಗೆ ಆಗಮಿಸಲಿದ್ದಾರೆ. ತಮ್ಮ ತುಂಟ ಕೃಷ್ಣನ ಜನ್ಮದಿನವನ್ನು ಆಚರಿಸಲು ಸಹಸ್ರಾರು ಭಕ್ತರು ಮಥುರಾ ತಲುಪಿದ್ದಾರೆ. ಶ್ರೀಕೃಷ್ಣ ಜನ್ಮಭೂಮಿ ದೇವಾಲಯದ ಸಂಕೀರ್ಣದ ಹೊರಗೆ ಭಕ್ತರ ಉದ್ದನೆಯ ಸರತಿ ಸಾಲುಗಳು ಕಂಡು ಬಂದಿದ್ದಾವೆ. ವಿಶೇಷವೆಂದರೆ ದೇವಾಲಯದ ಆವರಣದಿಂದ ಇಡೀ ನಗರದವರೆಗೆ ಮಿನುಗುವ ದೀಪಗಳೊಂದಿಗೆ ಅಲಂಕರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳನ್ನು ತಿಳಿಸಿದ್ದಾರೆ.
Last Updated : Feb 3, 2023, 8:26 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.