ವಿಮಾನ ನಿಲ್ದಾಣ ಕಾಮಗಾರಿಗಾಗಿ ರಸ್ತೆ ಬಂದ್: ಗ್ರಾಮಸ್ಥರ ಪ್ರತಿಭಟನೆ

By ETV Bharat Karnataka Team

Published : Nov 22, 2023, 7:39 PM IST

thumbnail

ಶಿವಮೊಗ್ಗ: ವಿಮಾನ ನಿಲ್ದಾಣ ಕಾಮಗಾರಿಗಾಗಿ ನಿಲ್ದಾಣ ಪಕ್ಕದ ರಸ್ತೆ ಬಂದ್ ಮಾಡಿದಕ್ಕೆ ಓತಿಘಟ್ಟ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ‌. ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಆರಂಭ ಮಾಡುವ ಸಲುವಾಗಿ ಕಾಮಗಾರಿ ನಡೆಸಲು ಅಧಿಕಾರಿಗಳು ಸರ್ವೆ ನಡೆಸಲು ಮುಂದಾಗಿದ್ದರು. ಇದಕ್ಕಾಗಿ ಓತಿಘಟ್ಟದಿಂದ ಕೇಂದ್ರ ಕಾರಾಗೃಹದ ಕಡೆ ಸಂಪರ್ಕ ಕಲ್ಲಿಸುವ ರಸ್ತೆಯನ್ನು ಬಂದ್ ಮಾಡಲಾಗಿತ್ತು.

ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ತಮ್ಮ ಜಮೀನುಗಳಿಗೆ ಹೋಗಲು ರಸ್ತೆ ಇಲ್ಲದಂತಾಗಿದೆ. ಇದರಿಂದ ಸಿದ್ದನಗುಡಿ ಮತ್ತು ಸಿರಿಯೂರು ಗ್ರಾಮಕ್ಕೆ 6 ಕಿ.ಮಿ ದೂರವಾಗಲಿದೆ. ರಸ್ತೆಯಲ್ಲಿ ಕಾಡುಗಳು ಎದುರಾಗಲಿದೆ. ಈ ರಸ್ತೆಗಳಲ್ಲಿ ರಾತ್ರಿ ಹೊತ್ತು‌ ಓಡಾಡಲು ಅನುಕೂಲಕರವಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ ವಿಮಾನ‌ ನಿಲ್ದಾಣಕ್ಕೆ ನೀಡಲಾದ ಭೂಮಿಗೆ ಸೂಕ್ತ ಪರಿಹಾರವೂ ದೊರೆತಿಲ್ಲ ಎಂದು ಸಹ ದೂರಿದ್ದಾರೆ. ಈ ವೇಳೆ, ತುಂಗಾ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ಸಮಾಧಾನ ಪಡೆಸಿದ್ದಾರೆ. ಪೊಲೀಸರು ಹಾಗೂ ತಾಲೂಕು ಆಡಳಿತದ ಮಧ್ಯ ಪ್ರವೇಶದಿಂದ ಗ್ರಾಮಸ್ಥರು ತಮ್ಮ ಪ್ರತಿಭಟನೆಯನ್ನು ವಾಪಸ್ ಪಡೆದುಕೊಂಡರು.

ಇದನ್ನೂ ಓದಿ: ಬೈಕ್​ನಲ್ಲಿ‌ ಬಂದು ಮಾರಕಾಸ್ತ್ರ ತೋರಿಸಿ ಸರಣಿ ಸುಲಿಗೆ ಮಾಡಿದ ದುಷ್ಕರ್ಮಿಗಳು

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.