ಕೇರಳ: ಸ್ಪೀಕರ್​ ಕಚೇರಿ ಎದುರು ಶಾಸಕರ ಘರ್ಷಣೆ, ನಾಲ್ವರಿಗೆ ಗಾಯ

By

Published : Mar 15, 2023, 1:37 PM IST

Updated : Mar 15, 2023, 2:01 PM IST

thumbnail

ತಿರುವನಂತಪುರಂ: ಕೇರಳ ವಿಧಾನಸಭೆಯ ಅಧಿವೇಶನದ ಎರಡನೇ ದಿನದಂದು ಭಾರಿ ಘರ್ಷಣೆ ಏರ್ಪಟ್ಟಿದೆ. ಸ್ಪೀಕರ್​ ವಿರುದ್ಧ ಧರಣಿ ಕುಳಿತ ವಿಪಕ್ಷ ನಾಯಕರನ್ನು ಮಾರ್ಷಲ್​​ಗಳು ಎಳೆದೊಯ್ಯುವ ವೇಳೆ ನೂಕಾಟ ನಡೆದಿದ್ದು, ನಾಲ್ವರು ಶಾಸಕರು ಗಾಯಗೊಂಡಿದ್ದಾರೆ. ಸ್ಪೀಕರ್ ಕಚೇರಿ ಎದುರು ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ಈ ರೀತಿಯ ಮುಖಾಮುಖಿ ಘರ್ಷಣೆ ನಡೆದಿದ್ದು ಕೇರಳ ರಾಜಕೀಯ ಇತಿಹಾಸದಲ್ಲಿಯೇ ಮೊದಲ ಬಾರಿ ಎಂದು ಹೇಳಲಾಗುತ್ತಿದೆ.

ಸ್ಪೀಕರ್ ಕಚೇರಿ ಎದುರು ಧರಣಿ ಕುಳಿತಿದ್ದ ಪ್ರತಿಪಕ್ಷದ ಸದಸ್ಯರನ್ನು ಮಾರ್ಷಲ್ಸ್​ ಕರೆದೊಯ್ಯಲು ಯತ್ನಿಸಿದಾಗ ವಾಗ್ವಾದ ನಡೆದಿದೆ. ಈ ವೇಳೆ ಭದ್ರತಾ ಸಿಬ್ಬಂದಿ ಬಲವಂತವಾಗಿ ಎಳೆದೊಯ್ದಿದ್ದಾರೆ. ಈ ವೇಳೆ ಪ್ರತಿರೋಧ ಒಡ್ಡಿದ ಹಿರಿಯ ಕಾಂಗ್ರೆಸ್ ನಾಯಕ ರಾಧಾಕೃಷ್ಣನ್‌ರನ್ನು ಮಾರ್ಷಲ್ಸ್​ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದಲ್ಲದೇ, ಸನೀಶ್ ಕುಮಾರ್ ಜೋಸೆಫ್, ಕೆ.ಕೆ.ರಾಮ, ಟಿ.ವಿ.ಇಬ್ರಾಹಿಂ, ಎ.ಕೆ.ಎಂ.ಅಶ್ರಫ್, ಎಂ.ವಿನ್ಸೆಂಟ್ ಅವರಿಗೂ ಗಾಯಗಳಾಗಿವೆ. ಶಾಸಕರುಗಳನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇಂದು ಬೆಳಗ್ಗೆ 10:30ರ ಸುಮಾರಿಗೆ ಸ್ಪೀಕರ್ ಕಚೇರಿ ಎದುರು ಹೈಡ್ರಾಮಾವೇ ನಡೆಯಿತು. ಸಭಾಧ್ಯಕ್ಷರು ತಮ್ಮ ತುರ್ತು ಪ್ರಸ್ತಾವನೆಯನ್ನು ತಿರಸ್ಕರಿಸಿದ್ದನ್ನು ವಿರೋಧಿಸಿ ಎರಡನೇ ದಿನವೂ ಪ್ರತಿಪಕ್ಷಗಳು ಪ್ರತಿಭಟಿಸಿದವು. ಸಭಾಧ್ಯಕ್ಷರ ಕಚೇರಿ ಎದುರು ಧರಣಿ ಕುಳಿತು ಘೋಷಣೆಗಳನ್ನು ಕೂಗಿದರು.

ಇದನ್ನೂ ಓದಿ: ಕ್ಷಮೆಗಾಗಿ ಬಿಜೆಪಿ ಕಾಂಗ್ರೆಸ್​ ಗುದ್ದಾಟ: ರಾಹುಲ್​ ಸಮರ್ಥಿಸಿಕೊಂಡ ಖರ್ಗೆ, ಪಟ್ಟು ಬಿಡದ ಬಿಜೆಪಿ

Last Updated : Mar 15, 2023, 2:01 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.