ಚಿಕ್ಕಬಳ್ಳಾಪುರ : ಪ್ರೀತಿಸಿ ದೂರಾಗಲು ಯತ್ನಿಸಿದ ಯುವಕನೊಂದಿಗೆ ಮದುವೆಯಾದ ಯುವತಿ

By

Published : Jul 22, 2023, 7:48 AM IST

Updated : Jul 22, 2023, 4:59 PM IST

thumbnail

ಚಿಕ್ಕಬಳ್ಳಾಪುರ : ಪ್ರೀತಿಸಿ ಬಳಿಕ ತನ್ನಿಂದ ದೂರವಾಗಲು ಯತ್ನಿಸಿದ ಯುವಕನೊಂದಿಗೆ ಯುವತಿ ಮದುವೆಯಾದ ಘಟನೆ ಜಿಲ್ಲೆಯ ಶಿಡ್ಲಘಟ್ಟದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದಿದೆ. ದಲಿತ ಸಂಘಟನೆಗಳ ಮುಖಂಡರು ಯುವಕನಿಗೆ ಬುದ್ಧಿವಾದ ಹೇಳಿ ರಾಜಿ ಸಂಧಾನ ನಡೆಸುವ ಮೂಲಕ ಇಬ್ಬರಿಗೂ ಮದುವೆ ಮಾಡಿಸಿದ ವಿಡಿಯೋ ವೈರಲ್​ ಆಗಿದೆ.

ಇಲ್ಲಿನ ಕಿರಿಗಿಂಬಿ ಗ್ರಾಮದ ಯುವಕ ಚೇತನ್ ಹಾಗೂ ಇಟಪ್ಪನಹಳ್ಳಿ ಗ್ರಾಮದ ವನಿತಾ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ವನಿತಾ ಈಗ ಗರ್ಭಿಣಿಯಾಗಿದ್ದಾಳೆ. ಈ ವಿಚಾರವನ್ನು ಪ್ರಿಯಕರ ಚೇತನ್​ ಬಳಿ ತಿಳಿಸಿದ್ದಾರೆ. ಇದಕ್ಕೆ ಚೇತನ್​ ಗರ್ಭವನ್ನು ತೆಗೆಸುವಂತೆ ಒತ್ತಾಯಿಸಿದ್ದ. ಇದಕ್ಕೆ ಒಪ್ಪದ ವನಿತಾ ಮದುವೆ ಮಾಡಿಕೊಳ್ಳುವಂತೆ ಚೇತನ್​ನಲ್ಲಿ ಕೇಳಿಕೊಂಡಿದ್ದಳು.

ಶುಕ್ರವಾರ ಚೇತನ್ ವನಿತಾಳನ್ನು ಶಿಡ್ಲಘಟ್ಟ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಗರ್ಭ ತೆಗೆಸಲು ಮುಂದಾಗಿದ್ದ. ಆದರೆ ಗರ್ಭ ತೆಗೆಸಲು ಯುವತಿ ನಿರಾಕರಿಸಿದ್ದಾಳೆ. ಅಲ್ಲದೆ ಚೇತನ್ ಜೊತೆ ವಾಗ್ವಾದ ನಡೆಸಿದ್ದಾಳೆ. ಇದನ್ನು ಗಮನಿಸಿದ ಸಾರ್ವಜನಿಕರು ಈ ಬಗ್ಗೆ ವಿಚಾರಿಸಿದಾಗ ಚೇತನ್​ ತಪ್ಪು ಮಾಡಿರುವುದು ಗೊತ್ತಾಗಿದೆ. ವಿಚಾರ ತಿಳಿದು ಸ್ಥಳಕ್ಕೆ ಬಂದ ದಲಿತ ಸಂಘಟನೆ ಮುಖಂಡರು ಚೇತನ್​ಗೆ ಬುದ್ಧಿವಾದ ಹೇಳಿ ಇಬ್ಬರಿಗೂ ಮದುವೆ ಮಾಡಿಸಿದ್ದಾರೆ. ಬಳಿಕ ಇಬ್ಬರ ಪೋಷಕರನ್ನು ಕರೆಸಿ ರಾಜಿ ಸಂಧಾನ ಮಾಡಿದ್ದಾರೆ. ಮದುವೆಯ ಸಂದರ್ಭದಲ್ಲಿ ಕೆಲವರು ಸೆರೆಹಿಡಿದ ವಿಡಿಯೋಗಳು ವೈರಲ್​ ಆಗಿವೆ.

ಇದನ್ನೂ ಓದಿ : ಶ್ರೀಗಂಧದ ಮರಗಳ್ಳರು ಅಂದರ್​: ಆರೋಪಿಗಳಿಂದ 4.52 ಲಕ್ಷ ರೂ. ಮೌಲ್ಯದ ವಸ್ತುಗಳು ಜಪ್ತಿ..

Last Updated : Jul 22, 2023, 4:59 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.