ಕರ್ನಾಟಕದಂತೆ ಛತ್ತೀಸ್‌ಗಢದಲ್ಲೂ ಬಿಜೆಪಿ ಸೋಲಲಿದೆ: ಸಿಎಂ ಭೂಪೇಶ್ ಬಘೇಲ್ - ಪ್ರಧಾನಿ ಮೋದಿ

🎬 Watch Now: Feature Video

thumbnail

By

Published : Jun 6, 2023, 9:12 PM IST

ರಾಯಪುರ (ಛತ್ತೀಸ್‌ಗಢ): ಕರ್ನಾಟಕದಲ್ಲಿ ಬಿಜೆಪಿ ತನ್ನ ಕೇಂದ್ರ ನಾಯಕತ್ವದ ನೆರನಿಂದ ಚುನಾವಣೆ ಎದುರಿಸಿ ಸೋಲು ಕಂಡಿದೆ. ಮುಂಬರುವ ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯಲ್ಲೂ ಇದೇ ಫಲಿತಾಂಶ ಮರುಕಳುಹಿಸಲಿದೆ ಎಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಚುನಾವಣೆಗೆ ಇನ್ನೂ ನಾಲ್ಕು ತಿಂಗಳು ಬಾಕಿ ಉಳಿದಿದೆ. ನಾನು ಈ ಹಿಂದೆ ಬಸ್ತಾರ್‌ಗೆ ಹೋದಾಗ ಅಲ್ಲಿ ಪ್ರಧಾನಿ ಮೋದಿ ರಾಜ್ಯಕ್ಕೆ ಬರುತ್ತಾರೆ ಎಂದು ಗೊತ್ತಾಯಿತು. ಕೊಂಡಗಾಂವ್​ಗೆ ಇಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಬರುತ್ತಿದ್ದಾರೆ ಎಂದು ನನಗೆ ತಿಳೀತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೂ ಕೂಡ ಬರುತ್ತಿದ್ದಾರೆ ಎಂದು ಮಾಧ್ಯಮಗಳಿಂದ ತಿಳಿದುಬಂದಿದೆ. ಚುನಾವಣೆ ಕಾರಣ ಎಲ್ಲರೂ ಬರುತ್ತಾರೆ. ಎಲ್ಲರೂ ಬಂದು ರಾಜ್ಯ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳನ್ನು ನೋಡಲಿ ಎಂದು ವ್ಯಂಗ್ಯವಾಡಿದರು.  

ರಾಹುಲ್​ ಗಾಂಧಿ ಬಗ್ಗೆ ಹಿಂದೂ ಮತ್ತು ಮುಸ್ಲಿಮರ ವಿಭಜಿಸುವ ಅಂಗಡಿ ತೆರೆದಿದ್ದಾರೆ ಎಂಬ ಜೆ.ಪಿ. ನಡ್ಡಾ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಬಘೇಲ್​, ನಡ್ಡಾ ಅವರನ್ನು ಬಿಜೆಪಿಯಲ್ಲೇ ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಅವರ ಹೇಳಿಕೆಯನ್ನು ನಾವೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ರಾಷ್ಟ್ರೀಯ ಅಧ್ಯಕ್ಷರಾಗಿ ತಮ್ಮದೇ ರಾಜ್ಯ ಹಿಮಾಚಲದಲ್ಲಿ ಬಿಜೆಪಿ ಗೆಲ್ಲಿಸಲು ಆಗಿಲ್ಲ. ಕರ್ನಾಟಕದಲ್ಲೂ ಬಿಜೆಪಿ ಸೋತಿದೆ. ನಡ್ಡಾ ಅವರನ್ನು ಯಾರು ಆಯ್ಕೆ ಮಾಡಿದ್ದಾರೆ ಎಂಬುದೇ ಇಲ್ಲಿಯವರೆಗೆ ತಿಳಿದಿಲ್ಲ ಎಂದು ಬಘೇಲ್ ಗೇಲಿ ಮಾಡಿದ್ದಾರೆ.

ಇದನ್ನೂ ಓದಿ: 'ಸತ್ಯ ಹೊರಬರಲಿ..': ಕಟಕ್‌ನಲ್ಲಿ ರೈಲು ದುರಂತದ ಗಾಯಾಳುಗಳನ್ನು ಭೇಟಿಯಾದ ಮಮತಾ ಬ್ಯಾನರ್ಜಿ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.