ಬೇಕರಿ ಗ್ರಾಹಕರ ಮೇಲೆ ಡ್ಯಾಗರ್ ಹಿಡಿದು ದರ್ಪ, ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಬೆಂಗಳೂರು ವೈರಲ್​ ವಿಡಿಯೋ

🎬 Watch Now: Feature Video

thumbnail

By ETV Bharat Karnataka Team

Published : Sep 11, 2023, 6:54 PM IST

ಬೆಂಗಳೂರು: ಬೆಂಗಳೂರಿನಲ್ಲಿ ಮಾರಕಾಸ್ತ್ರ ಹಿಡಿದು ಪುಂಡಾಟವಾಡುವವರ ಹಾವಳಿ ಮುಂದುವರೆದಿದೆ‌. ಪಕ್ಕದ ಅಂಗಡಿಯ ಗ್ರಾಹಕರ ಮೇಲೆ ಇದ್ದಕ್ಕಿದ್ದಂತೆ ಡ್ಯಾಗರ್ ಹಿಡಿದು ಹಲ್ಲೆಗೆ ಮುಂದಾದ ಆಸಾಮಿಯೊಬ್ಬ ತಾನೇ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ಭಾನುವಾರ ಸಂಜೆ ನಾಗರಭಾವಿ ವಿಲೇಜ್​ನಲ್ಲಿ ನಡೆದಿದೆ. ನಂದಿನಿ ಬೂತ್ ಮಾಲೀಕ ಕುರುಡಸ್ವಾಮಿ ಡ್ಯಾಗರ್ ಹಿಡಿದು ಹಲ್ಲೆಗೆ ಯತ್ನಿಸಿ ಆಸ್ಪತ್ರೆ ಪಾಲಾದ ಆರೋಪಿ. 

ನಂದಿನಿ‌ ಬೂತ್ ಪಕ್ಕದಲ್ಲಿರುವ ಬೇಕರಿ ಬಳಿ ನಿಂತಿದ್ದ ಗ್ರಾಹಕರೊಂದಿಗೆ ತಾನೇ ಕಿರಿಕ್‌ ಆರಂಭಿಸಿದ್ದ ಕುರುಡಸ್ವಾಮಿ ಏಕಾಏಕಿ ಡ್ಯಾಗರ್ ನಿಂದ ಇರಿಯಲು ಯತ್ನಿಸಿದ್ದಾನೆ. ಈ ವೇಳೆ, ತಪ್ಪಿಸಿಕೊಳ್ಳವ ಭರದಲ್ಲಿ ನಡೆದ ತಳ್ಳಾಟದಲ್ಲಿ ಕುರುಡಸ್ವಾಮಿಯ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಘಟನೆ ಬಗ್ಗೆ ಚಂದ್ರಾ ಲೇಔಟ್ ಪೊಲೀಸರು ಮಾಹಿತಿ ಪಡೆದಿದ್ದು, ತನಿಖೆಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಡ್ಯಾಗರ್ ಹಿಡಿದು ಹಲ್ಲೆ ನಡೆಸಲು ಯತ್ನಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈಟಿವಿ ಭಾರತ್​ಗೆ ಲಭ್ಯವಾಗಿದೆ. ದೃಶ್ಯದಲ್ಲಿ ಬೇಕರಿಗೆ ಬಂದ ಗ್ರಾಹಕರ ಬಳಿ ಡ್ಯಾಗರ್​ ಹಿಡಿದು ಕುರುಡುಸ್ವಾಮಿ ಪುಂಡಾಟ ಮೆರೆದಿದ್ದಾನೆ. ಬಳಿಕ ಹಲ್ಲೆಗೆ ಮುಂದಾಗಿದ್ದು, ಈ ವೇಳೆ ಗುಂಪುಗಳ ನಡುಚೆ ತಳ್ಳಾಟ ಏರ್ಪಟ್ಟಿರುವುದ ವಿಡಿಯೋದಲ್ಲಿ ಕಾಣಬಹುದಾಗಿದೆ. 

ಇದನ್ನೂ ಓದಿ: Watch... ಮದ್ಯದಂಗಡಿಗೆ ಲಗ್ಗೆ ಇಟ್ಟ ಗಜರಾಜನ ಪಡೆ.. ಮದ್ಯಪ್ರಿಯರು ಚೆಲ್ಲಾಪಿಲ್ಲಿ 

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.