ಕೊಪ್ಪಳ: ರೈಲ್ವೆ ಗೇಟ್ ಕಂಬಕ್ಕೆ ಡಿಕ್ಕಿ ಹೊಡೆದ ಸಾರಿಗೆ ಸಂಸ್ಥೆ ಬಸ್; 20 ಜನರಿಗೆ ಗಾಯ

By ETV Bharat Karnataka Team

Published : Nov 27, 2023, 3:39 PM IST

thumbnail

ಕೊಪ್ಪಳ: ಚಾಲಕನ ನಿಯಂತ್ರಣ ತಪ್ಪಿ ರೈಲ್ವೆ ಗೇಟ್ ಕಂಬಕ್ಕೆ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದ ಪರಿಣಾಮ ಸುಮಾರು 20 ಜನರು ಗಾಯಗೊಂಡ ಘಟನೆ ಕೊಪ್ಪಳ ನಗರದ ಕಿಡದಾಳ ರೈಲ್ವೆ ಗೇಟ್ ಬಳಿ ಸೋಮವಾರ ಸಂಭವಿಸಿದೆ. ಗಂಗಾವತಿಯಿಂದ ಕೊಪ್ಪಳಕ್ಕೆ ಬರುತ್ತಿದ್ದ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ 20ಕ್ಕೂ ಅಧಿಕ ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. 

ಇದನ್ನೂ ನೋಡಿ: ಹಾಸನ: ಕ್ಯಾಂಟರ್ ಲಾರಿ-ಬೈಕ್ ನಡುವೆ ಅಪಘಾತ: ತಾಯಿ, ಮಗ ಸ್ಥಳದಲ್ಲೇ ಸಾವು, ಸ್ಥಳೀಯರ ಆಕ್ರೋಶ

ಪ್ರತ್ಯೇಕ ಘಟನೆ- ಕ್ಯಾಂಟರ್​ ಲಾರಿ- ಬೈಕ್​ ಅಪಘಾತದಲ್ಲಿ ತಾಯಿ ಮಗ ಸಾವು: ಕ್ಯಾಂಟರ್​ ಲಾರಿ ಹಾಗೂ ಬೈಕ್​ ನಡುವೆ ಸಂಭವಿಸಿದ ಅಪಘಾತದಲ್ಲಿ ತಾಯಿ ಹಾಗೂ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಇತ್ತೀಚೆಗೆ ಹಾಸನ ನಗರದ ಹೊರವಲಯದದಲ್ಲಿರುವ ರಾಯಲ್​ ಅಪೋಲೋ​ ಶಾಲೆ ಬಳಿ ನಡೆದಿತ್ತು. ಕಮಲಮ್ಮ(71) ಹಾಗೂ ಸತೀಶ್(42)​ ಸಾವನ್ನಪ್ಪಿದ್ದರು. ಸಾರ್ವಜನಿಕರು ಸ್ಥಳದಲ್ಲೇ ಮೃತದೇಹಗಳನ್ನಿಟ್ಟು, ಲಾರಿ ಮೇಲೆ ಕಲ್ಲು ತೂರಾಡಿ, ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಪೊಲೀಸರು ಬಂದಾಗ ಸ್ಥಳೀಯರು ಹಾಗೂ ಪೊಲೀಸರ ಮಧ್ಯೆ ವಾಗ್ವಾದವೂ ನಡೆದಿತ್ತು. ಸರ್ಕಾರರಿಂದ ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಭರವಸೆ ಕೊಟ್ಟ ಬಳಿಕ ಸಾರ್ವಜನಿಕರು ಪಲ್ಟಿಯಾಗಿ ಬಿದ್ದಿದ್ದ ಕ್ಯಾಂಟರ್​ ಲಾರಿಯನ್ನು ಮೇಲಕ್ಕೆತ್ತಲು ಅನುವು ಮಾಡಿಕೊಟ್ಟಿದ್ದರು. 

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.