ಕೇರಳ ಘಟನೆ ಬೆನ್ನಲ್ಲೇ ಮತ್ತೊಂದು ದುರಂತ.. ಸಟ್ಲೆಜ್​ ನದಿಯಲ್ಲಿ ದೋಣಿ ಮಗುಚಿ ಇಬ್ಬರು ಸಾವು

By

Published : May 8, 2023, 7:17 PM IST

thumbnail

ರೂಪನಗರ (ಪಂಜಾಬ್​): ಸಟ್ಲೆಜ್​ ನದಿಯಲ್ಲಿ ದೋಣಿ ಮಗುಚಿ ಬಿದ್ದ ಪರಿಣಾಮ 2 ಮಂದಿ ಸಾವನ್ನಪ್ಪಿರುವ ಘಟನೆ ಪಂಜಾಬ್​ನ ರೂಪನಗರ ಜಿಲ್ಲೆಯ ಚೋಂಟಾ ಗ್ರಾಮದ ಬಳಿ ನಡೆದಿದೆ. ದೋಣಿ ಪ್ರಯಾಣಿಸುತ್ತಿದ್ದ ಆರು ಜನರ ಪೈಕಿ 2 ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಮೃತದೇಹಗಳ ಪತ್ತೆಗಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ.

ಭಾನುವಾರ ಸಂಜೆ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ತೆರಳಲು ದೋಣಿಯಲ್ಲಿ ನದಿ ದಾಟುತ್ತಿರುವಾಗ ವೇಳೆ ಅಸಮತೋಲನ ಉಂಟಾಗಿ ದೋಣಿಯಲ್ಲಿದ್ದ ಆರು ಜನರಲ್ಲಿ ಇಬ್ಬರು ನೀರು ಪಾಲಾಗಿದ್ದಾರೆ. ರಾಮ್​​​ ಲುಭಾಯಾ (32) ಮತ್ತು ಭಗತ್ರಂ (45) ಮೃತರು ಎಂದು ಗುರುತಿಸಲಾಗಿದೆ. ಈ ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಘಟನಾ ಸ್ಥಳಕ್ಕೆ ಆಗಮಿಸಿ ಮೃತ ದೇಹಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಈಗಾಗಲೇ ರಾಮ್​​​ ಲುಭಾಯಾ ಅವರ ಮೃತದೇಹ ಪತ್ತೆಯಾಗಿದ್ದು, ಭಗತ್ರಂ ಅವರ ಮೃತ ದೇಹಕ್ಕಾಗಿ ತೀವ್ರ ಶೋಧಕಾರ್ಯ ನಡೆಸುತ್ತಿದ್ದಾರೆ. 

ಕೇರಳದ ಮಲಪ್ಪುರಂನಲ್ಲಿ ಭಾನುವಾರ ಹೌಸ್​ಬೋಟ್​ ಮುಳುಗಿದ ಪರಿಣಾಮ 22 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ಮಹಿಳೆಯರು ಸೇರಿದ್ದಾರೆ.  

ಇದನ್ನೂ ಓದಿ : ಆಸ್ತಿ, ಹಣ ಹಂಚಲಿಲ್ಲವೆಂದು ತಾಯಿಯ ಅಂತ್ಯಕ್ರಿಯೆ ಮಾಡದ ಮಕ್ಕಳು: ಆಸ್ಪತ್ರೆಯಲ್ಲಿ ಶವ ಅನಾಥ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.