thumbnail

Video: ಶಾಸಕ ರುದ್ರಪ್ಪ ಲಮಾಣಿ ಪರ ದೀಡ್​ ನಮಸ್ಕಾರ ಹಾಕಿದ ಬೆಂಬಲಿಗ

By

Published : Aug 2, 2023, 8:08 AM IST

ಹಾವೇರಿ : ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಬೆಂಬಲಿಗರಾದ ಹಳೇರಿತ್ತಿ ಗ್ರಾಮದ ಗುಡ್ಡಪ್ಪ ನಿಂಗಪ್ಪ ಬೆಳವಿಗಿ ಎಂಬುವರು ಮೈಲಾರಲಿಂಗೇಶ್ವರನಿಗೆ ದೀಡ್​ ನಮಸ್ಕಾರ ಹಾಕುವ ಮೂಲಕ ಎಲ್ಲರ ಗಮನ ಸೆಳೆದರು. ವಿಧಾನಸಭೆ ಚುನಾವಣೆಯಲ್ಲಿ ರುದ್ರಪ್ಪ ಲಮಾಣಿ ಜಯಶಾಲಿಯಾದರೆ ಮೈಲಾರಲಿಂಗೇಶ್ವರನಿಗೆ ದೀಡನಮಸ್ಕಾರ ಹಾಕುವುದಾಗಿ ಹರಕೆ ಕಟ್ಟಿದ್ದರಂತೆ. ಅದರಿಂದ, ಮಂಗಳವಾರ ಗುಡ್ಡಪ್ಪ ತಮ್ಮ ಬೆಂಬಲಿಗರ ಜೊತೆ ಮೈಲಾರದ ತುಂಗಭದ್ರಾ ನದಿಯಿಂದ ಮೈಲಾರಲಿಂಗೇಶ್ವರ ದೇವಸ್ಥಾನದವರೆಗೆ ದೀಡ್​ ನಮಸ್ಕಾರ ಹಾಕಿದರು.

ಇದನ್ನೂ ಓದಿ :  ನ್ಯಾಯ ಸಮ್ಮತ ಬೇಡಿಕೆ ಈಡೇರಿಸಲು ಪಕ್ಷಾತೀತವಾಗಿ ಕೆಲಸ ಮಾಡುವೆ : ರುದ್ರಪ್ಪ ಲಮಾಣಿ

ತುಂಗಭದ್ರಾ ನದಿಯಿಂದ ದೇವಸ್ಥಾನದವರೆಗೆ ಸುಮಾರು ಎರಡು ಕಿ.ಮೀ ದೀಡ್​ ನಮಸ್ಕಾರ ಹಾಕಿದರು. ಗುಡ್ಡಪ್ಪನವರ ಈ ಕಾರ್ಯಕ್ಕೆ ಗ್ರಾಮದ ಹಲವರು ಸಾಥ್ ನೀಡಿದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ  ಡಿ.ಕೆ.ಶಿವಕುಮಾರ್ ಮತ್ತು ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಪರ ಜಯಘೋಷ ಕೂಗಲಾಯಿತು.

ಇದನ್ನೂ ಓದಿ : ರುದ್ರಪ್ಪ ಲಮಾಣಿಗೆ ಸಚಿವ ಸ್ಥಾನ ನೀಡುವಂತೆ ಅಭಿಮಾನಿಗಳ ಪ್ರತಿಭಟನೆ : ಸಿದ್ದರಾಮಯ್ಯ ವಿರುದ್ಧ ಆಕ್ರೋಶ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.